ಮದುವೆ ಕಾರ್ಯಕ್ರಮದಲ್ಲಿ ಇನ್ನೂ ಹೆಚ್ಚು ಸಾರಾಯಿ ಕೊಡಲಿಲ್ಲ ಎಂದು ಮಧುಮಗನನ್ನೇ ಇರಿದು ಕೊಂದ ಸ್ನೇಹಿತರು!

Prasthutha|

ಲಖನೌ : ಮದುವೆ ಕಾರ್ಯಕ್ರಮದಲ್ಲಿ ಸ್ನೇಹಿತರಿಗೆ ಸಾರಾಯಿ ನೀಡಿದ್ದು ಕಡಿಮೆಯಾಯಿತು ಎಂದು ಮಧುಮಗನನ್ನೇ ಇರಿದು ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆಲಿಗಢದ ಪಾಲಿಮುಕೀಂ ಪುರ ಗ್ರಾಮದಲ್ಲಿ ಈ ಘಟನೆ ನಡದಿದೆ.

- Advertisement -

28ರ ಹರೆಯದ ಬಬ್ಲೂಗೆ ಮದುವೆ ನಡೆದು ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ. ಈಗಾಗಲೇ ಮತ್ತಿನಲ್ಲಿದ್ದ ಆತನ ಸ್ನೇಹಿತರು ಇನ್ನಷ್ಟು ಸಾರಾಯಿ ಬೇಕೆಂದು ಕೇಳಿದ್ದರು. ಆದರೆ, ಇನ್ನು ಹೆಚ್ಚಿನ ಸಾರಾಯಿ ಇಲ್ಲ ಎಂದು ಆತ ಹೇಳಿದ್ದಾನೆ.

ಈ ವಿಚಾರ ವಾಗ್ವಾದಕ್ಕೆ ಕಾರಣವಾಗಿದೆ. ಕೋಪದ ಭರದಲ್ಲಿ ಓರ್ವ ಸ್ನೇಹಿತ ಮಧುಮಗನನ್ನೇ ಇರಿದಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಲ್ಲಿ ಆತ ಕೊನೆಯುಸಿರೆಳೆದಿದ್ದಾನೆ. ಐವರು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.  

Join Whatsapp