ಮಾಧ್ಯಮದವರಿಗೆ ಕಾಂಗ್ರೆಸ್ ‘ಡೋಸ್’ ನೀಡಿ: ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್

Prasthutha|

ಜೈಪುರ:   ರಾಜಸ್ಥಾನ ಕಾಂಗ್ರೆಸ್​ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಾಸ್ರಾ ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಾಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುವ ವೇಳೆ ‘ನೀವು ಮೊದಲು ಮಾಧ್ಯಮದವರಿಗೆ ಒಂದು ಡೋಸ್​ ಕೊಡಿ. ಅವರಿಗೆ ನೀವು ಡೋಸ್​ ಕೊಡದೆ ಹೋದರೆ, ಬಿಜೆಪಿಯಿಂದ ತೆಗೆದುಕೊಳ್ಳುತ್ತಾರೆ. ನಂತರ ನಮ್ಮ ವಿರುದ್ಧವಾಗಿ ಸುದ್ದಿ ಪ್ರಕಟಿಸುತ್ತಾರೆ ಎಂದು ಹೇಳಿದ್ದಾರೆ.

- Advertisement -

‘ನೀವು ಯಾರಾದರೂ ಯಾವುದೇ ಸಭೆ, ಸಮಾರಂಭಗಳಿಗೆ ಹೊರಟಾಗ, ಪತ್ರಕರ್ತರು, ಮಾಧ್ಯಮ ಸಿಬ್ಬಂದಿ ಬಳಿಗೆ ಹೋಗಿ ನಾವು ಇಂಥ ಕೆಲಸಕ್ಕೆ ಹೊರಟಿದ್ದೇವೆ ಎಂದು ಮಾಹಿತಿ ಕೊಟ್ಟು ಹೋಗಬೇಕು. ಆಗ ಅವರು ನಿಮ್ಮೊಂದಿಗೆ ಬರುತ್ತಾರೆ. ಯಾಕೆಂದರೆ ಅವರಿಗೆ ‘ಡೋಸ್​’ ಬೇಕಾಗಿರುತ್ತದೆ. ನೀವು ಆ ಡೋಸ್ ನೀಡದಿದ್ದರೆ, ಅವರು ಬಿಜೆಪಿಯಿಂದ ‘ಡೋಸ್​’ ಪಡೆದು, ನಮ್ಮ ವಿರುದ್ಧ ಸುದ್ದಿಗಳನ್ನು ಪ್ರಕಟಿಸುತ್ತಾರೆ. 

ಕಾಂಗ್ರೆಸ್​ ಒಳ್ಳೆಯ ಉತ್ಪನ್ನಗಳನ್ನು ಹೊಂದಿರುವುದರಿಂದ, ಮಾಧ್ಯಮ ಸಿಬ್ಬಂದಿ ಅತ್ತಿತ್ತ ನೋಡಲು ಕಾಂಗ್ರೆಸ್ ಕಾರ್ಯಕರ್ತರು ಬಿಡಬಾರದು ಎಂದು ಹೇಳಿದ್ದಾರೆ.  ನಮ್ಮ ಪಕ್ಷ ಪತ್ರಕರ್ತರಿಗೆ ಗ್ಯಾರಂಟಿ ನೀಡಿದರೆ ಅವರೂ ನಮ್ಮ ಪರವಾಗಿ ಇರುತ್ತಾರೆ. ಮುಂದಿನ ವರ್ಷಗಳಲ್ಲಿ ಬರುವ ವಿಧಾನಸಭೆ ಚುನಾವಣೆಗಳು, ಲೋಕಸಭೆ ಚುನಾವಣೆಗಳಲ್ಲಿ ನಮ್ಮ ಪರವಾಗಿಯೇ ಸುದ್ದಿಗಳು ಬರುತ್ತವೆ. ನಾವೂ ಗೆಲ್ಲಬಹುದು ಎಂದು ದೋಟಾಸ್ರಾ ಹೇಳಿದ್ದಾರೆ.

- Advertisement -

‘ಡೋಸ್​’ ಎಂಬ ಶಬ್ದವನ್ನು ಗೋವಿಂದ್ ಸಿಂಗ್ ಹಣ ಎಂಬ ಅರ್ಥದಲ್ಲಿ ಬಳಸಿದ್ದಾರೆ ಎನ್ನಲಾಗಿದ್ದು, ಸಿಂಗ್ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ

Join Whatsapp