ಗ್ಯಾಸ್ ಬೆಲೆ ಏರಿಕೆ| ಕಟೀಲ್ ಭಾಷಣದ ವೇಳೆ ಆಕ್ರೋಶ ಹೊರಹಾಕಿದ ಬಿಜೆಪಿ ಕಾರ್ಯಕರ್ತೆ

Prasthutha|

ಹಾವೇರಿ: ಹಾವೇರಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾಷಣ ಮಾಡುತ್ತಿದ್ದಾಗ, ವೇದಿಕೆ ಮುಂದೆಯೇ ಬಿಜೆಪಿ ಕಾರ್ಯಕರ್ತೆ ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾಷಣ ಮಾಡುತ್ತಿದ್ದರು. ಈ ವೇಳೆ ವೇದಿಕೆ ಮುಂದೆ ಕುಳಿತಿದ್ದ ಬನ್ನಿಹಟ್ಟಿ ಗ್ರಾಮದ ಕಾರ್ಯಕರ್ತೆ ಬಸಮ್ಮ ಕಮ್ಮಾರ್, ಸಿಲಿಂಡರ್ ದರ 1,300 ರೂ. ಮಾಡಿದ್ದೀರಿ, ಬಡವರು ಎಲ್ಲಿ ಹೋಗಬೇಕು? ಹಂತಹಂತವಾಗಿ ಏರಿಸುವ ಬದಲು ಒಂದೇ ಬಾರಿಗೆ 1500 ರೂ. ಮಾಡಿಬಿಡಿ ಸರಿಯಾಗುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ನಿಮ್ಮ ಬಳಿ ದುಡ್ಡಿದೆ ನಿಮ್ಮನೆ ಹೆಣ್ಣುಮಕ್ಕಳು ಅಡುಗೆ ಮಾಡಿ ಹಾಕುತ್ತಾರೆ. ನಾವು ಬಡವರು ಎಲ್ಲಿಂದ ಹಣ ತರುವುದು? ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಇತರೆ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಬಸಮ್ಮರನ್ನು ಸಮಾಧಾನ ಪಡಿಸಿದರು.

Join Whatsapp