ಪಂಜಾಬ್‌ನಲ್ಲಿ ಗಾಂಧಿ ಪ್ರತಿಮೆ ಧ್ವಂಸಗೈದ ದುಷ್ಕರ್ಮಿಗಳು !

Prasthutha|

ಅಮೃತಸರ: ಪಂಜಾಬ್’ನ ಬಟಿಂಡಾ ಜಿಲ್ಲೆಯ ರಾಮಮಂಡಿ ಪಟ್ಟಣದಲ್ಲಿ ಉದ್ಯಾನವನದಲ್ಲಿ ಪ್ರತಿಷ್ಠಾಪನೆ ಮಾಡಲಾದ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.

- Advertisement -

ಉದ್ಯಾನವನದ ಹುಲ್ಲಿನ ಮೇಲೆ ಧ್ವಂಸಗೊಂಡ ಗಾಂಧಿ ಪ್ರತಿಮೆಯನ್ನು ಜನರು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. 3 ಅಡಿ ಎತ್ತರದ ಪ್ರತಿಮೆಯ ತಲೆ ಕಾಣೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಕೃಷ್ಣಕುಮಾರ್ ಅವರು ನೀಡಿದ ದೂರಿನನ್ವಯ ಪೊಲೀಸರು ಅಪರಿಚತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಇದುವರೆಗೂ ಯಾರನ್ನೂ ಬಂಧಿಸಿಲ್ಲ.

- Advertisement -

ಸದ್ಯ ಪೊಲೀಸರು ಸಮೀಪದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದಾರೆ.

Join Whatsapp