ಗುಜರಾತಿನ ವಡೋದರ ನಗರದಲ್ಲಿ ತೆರಿಗೆ ವಂಚಕರಿಗೆ ಮುಕ್ತ ಅವಕಾಶ

Prasthutha|

ನವದೆಹಲಿ: ನಾನಾ ಮೂಲದಲ್ಲಿ ಹಣ ತೊಡಗಿಸಿ ತೆರಿಗೆ ವಂಚನೆ ಮಾಡಲು ಗುಜರಾತಿನ ವಡೋದರದಲ್ಲಿ ಸರಕಾರವೇ ಅವಕಾಶ ಮಾಡಿಕೊಟ್ಟಿದೆ. ಸರಕಾರಕ್ಕೂ ಪಾಲು ಇದ್ದಿರಬೇಕು ಎಂಬ ಆರೋಪ ಕೇಳಿಬಂದಿದೆ.
ಅನಿಲ್ ಅಂಬಾನಿ ವಡೋದರದಲ್ಲಿ 18 ಕಂಪೆನಿಗಳನ್ನು ತೆರಿಗೆ ವಂಚನೆಗಾಗಿಯೇ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸಚಿನ್ ತೆಂಡೂಲ್ಕರ್, ಕಿರಣ್ ಮಜುಂದಾರ್ ಮೊದಲಾದವರು ವಡೋದರದಲ್ಲಿ ತೆರಿಗೆ ವಂಚಿಸಲೆಂದೇ ಕೆಲವು ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದಾರೆ.

- Advertisement -


ಪಾಕಿಸ್ತಾನದ ಶೌಕತ್ ಸರಿನ್, ಜೋರ್ಡಾನ್ ಅರಸ 2ನೇ ಅಬ್ದುಲ್ಲಾ, ಪಾಪ್ ಗಾಯಕಿ ಶಕೀರಾ ಮೊದಲಾದವರು ಇಲ್ಲಿನ ತೆರಿಗೆ ವಂಚನೆಯ ಅನುಕೂಲ ಪಡೆದುಕೊಂಡಿದ್ದಾರೆ.
ಪಂಡೋರಾ ಪೇಪರ್ಸ್ ಸೋರಿಕೆಯಿಂದ ಈ ಮಾಹಿತಿ ಹೊರಬಂದಿದೆ. ಈಗ ಸರಕಾರ ಸೋರಿಕೆ ಬಗೆಗೆ ತನಿಖೆ ನಡೆಸಲು ಮುಂದಾಗಿದೆ.

Join Whatsapp