ಮದುವೆ ಹೆಸರಿನಲ್ಲಿ ವಂಚನೆ; ಬಿಜೆಪಿ ಮುಖಂಡನ ವಿರುದ್ದ ಎಫ್‌ಐಆರ್‌

Prasthutha|

ಒಡಿಶಾ:  ಪ್ರೀತಿಯ ಹೆಸರಿನಲ್ಲಿ ವಂಚಿಸಿದ್ದಾರೆ ಎಂದು ಪ್ರೇಯಸಿಯೊಬ್ಬಳು  ಬಿಜೆಪಿ ಮುಖಂಡನೊಬ್ಬನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಘಟನೆ ಜಗತ್‌ಸಿಂಗ್‌ಪುರ ಜಿಲ್ಲೆಯ ತೀರ್ಥೋಲ್‌  ನಲ್ಲಿ ನಡೆದಿದೆ.

- Advertisement -

ಜಗತ್‌ಸಿಂಗ್‌ಪುರ ಜಿಲ್ಲೆಯ ತೀರ್ಥೋಲ್‌ ಶಾಸಕ ಹಾಗೂ ಬಿಜೆಪಿ ಮುಖಂಡ ವಿಜಯಶಂಕರ್‌ ದಾಸ್‌ ವಂಚಿಸಿದ ಆರೋಪಿ. ಈತನ ವಿರುದ್ಧ ಪ್ರೇಯಸಿ ಸೋಮಲಿಕಾ ದಾಸ್ (29) ನೀಡಿದ ದೂರಿನ ಮೇರೆಗೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಗತ್‌ಸಿಂಗ್‌ಪುರ ಮುಖ್ಯ ಪೊಲೀಸ್ ಠಾಣೆ ಪ್ರಭಾರಿ ಇನ್ಸ್ಪೆಕ್ಟರ್ ಪ್ರವಾಸ್ ಸಾಹು ತಿಳಿಸಿದ್ದಾರೆ.

ಮಹಿಳೆ ಮತ್ತು ಶಾಸಕ ದಾಸ್ ವಿವಾಹ ನೋಂದಣಿ ಕಚೇರಿಯಲ್ಲಿ ಮೇ 17 ರಂದು ಮದುವೆಗೆ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ. ನಿಗದಿತ ದಿನಾಂಕದಂದು ಮಹಿಳೆ ತನ್ನ ಕುಟುಂಬದೊಂದಿಗೆ ಮದುವೆ ನೋಂದಣಿ ಕಚೇರಿಗೆ ಬಂದಾಗ ಶಾಸಕ ವಿಜಯಶಂಕರ್ ದಾಸ್ ಅಲ್ಲಿಗೆ ಬಂದಿರಲಿಲ್ಲ. ಕಳೆದ ಮೂರು ವರ್ಷಗಳಿಂದ ನಾವು  ಪ್ರೀತಿಸುತ್ತಿದ್ದೇವೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಇದೇ ದಿನಾಂಕದಂದು ಮದುವೆಯಾಗುವುದಾಗಿ ಭರವಸೆ ನೀಡಿದ್ದು, ಇದೀಗ ತನಗೆ  ವಂಚಿಸಿರುವ  ಆತನ  ಸಹೋದರ ಮತ್ತು ಕುಟುಂಬದ ಇತರ ಸದಸ್ಯರಿಂದ ನನಗೆ ಈಗ ಬೆದರಿಕೆಗಳು ಬರುತ್ತಿವೆ. ವಿಜಯ್‌ ಶಂಕರ್‌ಗೆ ಫೋನ್‌ ಮಾಡಿ ವಿಚಾರಿಸೋಣ ಎಂದರೆ ಅವರು ನನ್ನ ಕರೆಯನ್ನೂ ಸ್ವೀಕರಿಸುತ್ತಿಲ್ಲ ಎಂದು ಎಫ್‌ಐಆರ್‌ ನಲ್ಲಿ ದೂರಿದ್ದಾರೆ.

- Advertisement -

ಶಾಸಕ ದಾಸ್ ಮತ್ತು ಮಹಿಳೆಯ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದೀಗ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಡಿದೆ.  ವಿಪಕ್ಷಗಳು ಶಾಸಕರನ್ನು ಬಂಧಿಸಬೇಕು ಹಾಗೂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿವೆ. ನಮ್ಮ ಮಗಳಿಗೆ ನ್ಯಾಯ ಕೊಡಿಸುವುದಾಗಿ ಪೊಲೀಸರು ಹೇಳುತ್ತಿದ್ದಾರೆ. ನ್ಯಾಯ ಸಿಗದೆ ಹೋದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Join Whatsapp