ವಾಹನದ ಚಕ್ರ ಬದಲಿಸುತ್ತಿದ್ದವರ ಮೇಲೆ ವಾಹನ ಹರಿದು ನಾಲ್ವರು ಸಾವು

Prasthutha|

ಬಾಗಲಕೋಟೆ: ರಸ್ತೆ ಬಂದಿ ಪಂಕ್ಚರ್ ಆಗಿ ನಿಂತಿದ್ದ ಕ್ಯಾಂಟರ್ ನ ಟಯರ್ ಬದಲಾಯಿಸುತ್ತಿದ್ದವರ ಮೇಲೆ ಅಪರಿಚಿತ ವಾಹನ ಹರಿದ ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ರಾಷ್ಟ್ರೀಯ ಹೆದ್ದಾರಿ 218ರ ಬಾಡಗಂಡಿ ಬಳಿ ನಡೆದಿದೆ.
ಬೀಳಗಿ ಪಟ್ಟಣದ ರಾಮಸ್ವಾಮಿ, ರಝಾಕ್ ಸಾಬ್, ಮಲ್ಲಪ್ಪ ಹಾಗೂ ನಾಸೀರ್ ಮೃತಪಟ್ಟವರು.

- Advertisement -


ಹುಬ್ಬಳ್ಳಿ-ಸೋಲ್ಹಾಪೂರ ರಾಷ್ಟ್ರೀಯ ಹೆದ್ದಾರಿ 208ರಲ್ಲಿ ನಿನ್ನೆ ಮಧ್ಯರಾತ್ರಿ 11ರ ವೇಳೆ ನಿಂತಿದ್ದ ಕ್ಯಾಂಟರ್ ಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.


ಪಂಚರ್ ಆದ ಹಿನ್ನೆಲೆ ರಸ್ತೆ ಪಕ್ಕಕ್ಕೆ ಕ್ಯಾಂಟರ್ ನಿಲ್ಲಿಸಿ ಚಕ್ರ ಬದಲಾಯಿಸುವ ವೇಳೆ ವಾಹನವೊಂದು ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿ, ಅಪಘಾತ ನಡೆಸಿ ಪರಾರಿಯಾಗಿರುವ ವಾಹನ ಚಾಲಕನಿಗೆ ಶೋಧ ನಡೆಸಲಾಗಿದೆ.

Join Whatsapp