ಪುತ್ತಿಲ ಬಿಜೆಪಿ ಸೇರ್ಪಡೆಗೆ ಷರತ್ತು ವಿಧಿಸಿದ ಮಾಜಿ‌ ಶಾಸಕ ಮಠಂದೂರು!

Prasthutha|

ಪುತ್ತೂರು: ಬಿಜೆಪಿಗೆ ಸೆಡ್ಡು ಹೊಡೆದು ಪುತ್ತಿಲ ಪರಿವಾರ ಸ್ಥಾಪಿಸಿರುವ ಅರುಣ್‌ ಕುಮಾರ್‌ ಪುತ್ತಿಲ ಬಿಜೆಪಿ ಪಾಳಯ ಸೇರಲು ರಾಷ್ಟ್ರೀಯ ನಾಯಕರ ಮಟ್ಟದಲ್ಲಿ ಹಸುರು ನಿಶಾನೆ ಸಿಕ್ಕಿರುವಾಗಲೇ ಮಾಜಿ ಶಾಸಕ ಸಂಜೀವ ಮಠಂದೂರು ಪುತ್ತಿಲ ಸೇರ್ಪಡೆಗೆ ಬಹಿರಂಗವಾಗಿ ಷರತ್ತು ವಿಧಿಸಿದ್ದಾರೆ.

- Advertisement -

ವೀಡಿಯೊವೊಂದರಲ್ಲಿ ಮಾತನಾಡಿರುವ ಸಂಜೀವ ಮಠಂದೂರು, ಪುತ್ತಿಲ ಬಿಜೆಪಿಗೆ ಬರುವುದಕ್ಕೆ ಸ್ವಾಗತ. ಆದರೆ ಪಕ್ಷ ಸೇರ್ಪಡೆಗೆ ಮೊದಲು ಅವರು ತಮ್ಮ ಸಂಘಟನೆಯನ್ನು ವಿಸರ್ಜಿಸಬೇಕು ಹಾಗೂ ಹಿರಿಯರಿಗೆ ನೋವುಂಟು ಮಾಡುವ ರೀತಿಯಲ್ಲಿ ಆಡಿರುವ ಮಾತುಗಳಿಗೆ ವಿಷಾದ ವ್ಯಕ್ತಪಡಿಸಬೇಕು ಎಂದು ಹೇಳಿದ್ದಾರೆ.

- Advertisement -

Join Whatsapp