ರಮೇಶ್ ಜಾರಕಿಹೊಳಿ ವಿರುದ್ಧ FIR

Prasthutha|

ಬೆಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಬೆಂಗಳೂರಿನ ವಿವಿ ಪುರಂ ಠಾಣೆಯಲ್ಲಿ ಸಾಹುಕಾರ್ ವಿರುದ್ಧ FIR ದಾಖಲಾಗಿದೆ. ಗೋಕಾಕ್ ನಲ್ಲಿರುವ ಸೌಭಾಗ್ಯ ಲಕ್ಷ್ಮಿ ಶುಗರ್ ಫ್ಯಾಕ್ಟರಿ ಸಲುವಾಗಿ ರಮೇಶ್ ಜಾರಕಿಹೊಳಿ ಕೋಟ್ಯಂತರ ರೂಪಾಯಿ ಸಾಲವನ್ನು ಪಡೆದುಕೊಂಡಿದ್ದು, ಸಾಲವನ್ನು ಮರುಪಾವತಿ ಮಾಡದೆ ಇದ್ದಿದ್ದರಿಂದ FIR ದಾಖಲಾಗಿದೆ.

- Advertisement -

ಜಾರಕಿಹೊಳಿ ಸೌಭಾಗ್ಯ ಲಕ್ಷ್ಮಿ ಮೈ ಶುಗರ್ ಕಂಪನಿ ಅಧ್ಯಕ್ಷ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ. ವಸಂತ ಪಾವಡೆ ಹಾಗೂ ಶಂಕರ ಪಾವಡೆ ನಿರ್ದೇಶಕರಾಗಿದ್ದಾರೆ. ಕಂಪೆನಿ ಚಾಮರಾಜಪೇಟೆ ಕರ್ನಾಟಕ ರಾಜ್ಯ ಸಹಕಾರಿ ಅಪೇಕ್ಷೆ ಬ್ಯಾಂಕ್ ನಲ್ಲಿ 2013ರಿಂದ 2017 ರ ವರೆಗೂ ಕೂಡ ಹಂತ ಹಂತವಾಗಿ ಜಾರಕಿಹೊಳಿ 239. 87 ಲಕ್ಷಗಳನ್ನು ಸಾಲವಾಗಿ ಹಂತವಾಗಿ ಪಡೆದಿದೆ. 2013ರ ವರೆಗೆ 430 ಕೋಟಿ 7 ಲಕ್ಷ ರೂಪಾಯಿ ಸಾಲ ಬಾಕಿ ಇರುತ್ತದೆ.

- Advertisement -

ಈ ಸಾಲವನ್ನು ಮರುಪಾವತಿ ಮಾಡಲೇ ಇರುವಂತ ಹಿನ್ನೆಲೆಯಲ್ಲಿ ಈ ಒಂದು ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 406 420 ಅಡಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕರ್ನಾಟಕ ರಾಜ್ಯ ಸಹಕಾರಿ ಅಪೇಕ್ಸ್ ಬ್ಯಾಂಕ್ ಮ್ಯಾನೇಜರ್ FIR ದಾಖಲಿಸಿದ್ದಾರೆ.

Join Whatsapp