ಲಡ್ಡುಗಾಗಿ ಹೊಡೆದಾಟ: ಠಾಣೆ ಮೆಟ್ಟಿಲೇರಿದ ವಧು, ವರನ ಕುಟುಂಬಸ್ಥರು!

Prasthutha|

ಮುಂಗೇಲಿ: ಮದುವೆ ಮನೆಯಲ್ಲಿ ಲಡ್ಡೂಗಾಗಿ ಗಲಾಟೆ, ಹೊಡೆದಾಟ ನಡೆದು ಎರಡು ಕುಟುಂಬಗಳು ಠಾಣೆ ಮೆಟ್ಟಿಲೇರಿದ್ದ ಘಟನೆ ಜಿಲ್ಲೆಯ ಚಾರ್ಭಾಟದಲ್ಲಿ ನಡೆದಿದೆ.

- Advertisement -


ಮುಂಗೇಲಿ ಜಿಲ್ಲೆಯ ಬೆಮೆತಾರಾ ಗ್ರಾಮಕ್ಕೆ ಸೇರಿದ ಗುಣರಾಮ್ ಸಾಹು ಅವರ ಪುತ್ರ ಸೂರಜ್ ಸಾಹು ಅವರು ರಂಭಾಜ್ ಸಾಹು ಅವರ ಮಗಳು ಕುಂತಿಯೊಂದಿಗೆ ವಿವಾಹವಾಗಲು ಚಾರ್ಭಾಟಕ್ಕೆ ತೆರಳಿದ್ದರು. ವಧುವಿನ ಮನೆಯನ್ನು ತಲುಪಿದ್ದ ವರನ ಕುಟುಂಬಸ್ಥರು ಮದುವೆ ಪ್ರಕ್ರಿಯೆಗಳನ್ನು ನಡೆಸಿದ್ದರು. ಮದುವೆ ಮನೆಯಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು.


ಊಟದ ಸಮಯದಲ್ಲಿ ಅತಿಥಿಗಳು ವಿಭಿನ್ನ ತಿನಿಸುಗಳನ್ನು ಸವಿಯುತ್ತಿರುವಾಗ ಕೆಲ ಅತಿಥಿಗಳು ಲಡ್ಡುಗಳನ್ನು ಕೇಳಿದ್ದಾರೆ. ಆದರೆ, ಮದುವೆ ಮನೆಯಲ್ಲಿ ವಧುವಿನ ಪಕ್ಷದವರು ಲಡ್ಡುಗಳ ವ್ಯವಸ್ಥೆ ಮಾಡಿರಲಿಲ್ಲ. ಲಡ್ಡೂ ವ್ಯವಸ್ಥೆ ಮಾಡದ ಕಾರಣ ಅತಿಥಿಗಳ ಬೇಡಿಕೆ ಈಡೇರಿಸಲು ವಧುವಿನ ಪಕ್ಷದವರಿಗೆ ಸಾಧ್ಯವಾಗಿಲ್ಲ. ಈ ವೇಳೆ, ಎರಡೂ ಪಕ್ಷದ ಕಡೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಿದೆ.

Join Whatsapp