ಆಸ್ತಿಗಾಗಿ ಸುಪಾರಿ ಕೊಟ್ಟು ತಂದೆಯ ಕೊಲೆ; ಆರೋಪಿಗಳು ಪೊಲೀಸ್ ವಶ

Prasthutha|

ಶಿವಮೊಗ್ಗ: ಆಸ್ತಿಗಾಗಿ ಸುಪಾರಿ ಕೊಟ್ಟು ತಂದೆಯನ್ನೇ ಮಕ್ಕಳು ಕೊಲೆ ಮಾಡಿಸಿದ ಘಟನೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದ ಬೋವಿ ಗ್ರಾಮದಲ್ಲಿ ನಡೆದಿದೆ.

- Advertisement -


ನಾಗೇಂದ್ರಪ್ಪ ಕೊಲೆಯಾದ ವ್ಯಕ್ತಿ. ನಾಗೇಂದ್ರಪ್ಪ ಅವರ ಶವ ಶಿರಾಳಕೊಪ್ಪದಲ್ಲಿ ನ. 29 ರಂದು ಚರಂಡಿಯಲ್ಲಿ ಪತ್ತೆ ಆಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಶಿರಾಳಕೊಪ್ಪ ಪೊಲೀಸರು ತನಿಖೆ ನಡೆಸಿದ ವೇಳೆ ರಹಸ್ಯಗಳು ಬಯಲಾಗಿದೆ.


ಕೃತ್ಯ ನಡೆಸಿದ ಅವರ ಮಕ್ಕಳಾದ ಮಂಜುನಾಥ್, ಉಮೇಶ್‌ ಹಾಗೂ ಸುಪಾರಿ ತೆಗೆದುಕೊಂಡಿದ್ದ ರಿಜ್ವಾನ್, ಹಬೀಬುಲ್ಲಾ, ಸುಹೇಲ್‌ ಎಂಬವರನ್ನು ಬಂಧಿಸಿದ್ದಾರೆ.

- Advertisement -


ನಾಗೇಂದ್ರಪ್ಪನ ಮೊದಲ ಪತ್ನಿ ನಿಧನಳಾದ ಕಾರಣ ಎರಡು ವರ್ಷಗಳ ಹಿಂದೆ ವಿಧವೆಯೊಬ್ಬಳನ್ನು ಮೊದಲ ಪತ್ನಿಯ ಐವರು ಮಕ್ಕಳು ನಿಂತು ನಾಗೇಂದ್ರಪ್ಪನಿಗೆ ಮದುವೆ ಮಾಡಿಸಿದ್ದರು.


KSRP ನಿವೃತ್ತ ARSI ಆಗಿರುವ ನಾಗೇಂದ್ರಪ್ಪ ಅವರಿಗೆ ಉತ್ತಮ ಫಸಲು ಬರುವ ಐದು ಎಕರೆ ತೋಟವಿತ್ತು. ಮಕ್ಕಳು ಆಸ್ತಿ ಪಾಲು ಮಾಡುವಂತೆ ಒತ್ತಾಯಿಸುತ್ತಿದ್ದು, ನಾಗೇಂದ್ರಪ್ಪ ಆಸ್ತಿ ಪಾಲಿಗೆ ನಿರಾಕರಿಸಿದ್ದ. ಈ ಮಧ್ಯೆ ಎರಡನೇ ಪತ್ನಿಗೂ ಗಂಡು ಮಗು ಜನಿಸಿದ್ದು, ಆಸ್ತಿ ಕೈ ತಪ್ಪಿ ಹೋಗುವ ಭಯದಿಂದ ಮೊದಲ ಪತ್ನಿಯ ಮಕ್ಕಳಾದ ಮಂಜುನಾಥ್, ಉಮೇಶ್ ಸುಪಾರಿ ಕೊಟ್ಟು ಅಪ್ಪನನ್ನೇ ಕೊಲೆ ಮಾಡಿಸಿದ್ದಾರೆ.
ನಾಗೇಂದ್ರಪ್ಪನನ್ನು ತಮ್ಮ ಆಟೋವೊಂದರಲ್ಲಿ ಹತ್ತಿಸಿಕೊಂಡು ಪುಣೇದಹಳ್ಳಿ ಗ್ರಾಮದ ಬಳಿ ಕರೆದೊಯ್ದ ಆರೋಪಿಗಳು ಬಲವಂತದಿಂದ ನಶೆ ಬರುವ ಔಷಧಿ ಕುಡಿಸಿ ಉಸಿರುಗಟ್ಟಿಸಿ ಕೊಂದು ಶವವನ್ನು ಉಡುಗಣಿ ಗ್ರಾಮದಿಂದ ಕುಸೂರು ಗ್ರಾಮಕ್ಕೆ ಹೋಗುವ ಮಣ್ಣಿನ ರಸ್ತೆಯ ಪಕ್ಕದಲ್ಲಿನ ಚರಂಡಿಗೆ ಎಸೆದಿದ್ದಾರೆ.

Join Whatsapp