ಅತಿಯಾಗಿ ಟಿವಿ ನೋಡಿದಕ್ಕೆ ಬೈದ ತಂದೆ: ನೊಂದ ಮಗ‌ ಆತ್ಮಹತ್ಯೆಗೆ ಶರಣು

Prasthutha|

ಬೆಂಗಳೂರು: ಹೆಚ್ಚು ಟಿವಿ ನೋಡದಂತೆ  ತಂದೆ ಬೈದಿದ್ದರಿಂದ ಆಕ್ರೋಶ ಗೊಂಡ ಬಾಲಕನೋರ್ವ ಚಾಕುವಿನಿಂದ ಹೊಟ್ಟೆ ಹಾಗು ಕತ್ತಿಗೆಗೆ ಇರಿದುಕೊಂಡು‌ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಜಗಜೀವನರಾಮನಗರದಲ್ಲಿ ನಡೆದಿದೆ.

- Advertisement -

ಜಗಜೀವನರಾಮನಗರದ ಸೈಯದ್ ಶಾಹೀಲ್ ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ.

ಬಾಲಕ‌ ಸೈಯದ್ ಶಾಹೀಲ್ ಅತಿಯಾಗಿ ಟಿವಿ ನೋಡುತ್ತಿದ್ದು, ಇದನ್ನು ಕಂಡ ತಂದೆ ಹೆಚ್ಚು ಟಿ.ವಿ ನೋಡಬಾರದು ಎಂದು ಹಲವು ಬಾರಿ ಬುದ್ದಿವಾದ ಹೇಳಿದ್ದಾರೆ.

- Advertisement -

ಆದರೂ ವರ್ತನೆ ಸರಿ‌ ಮಾಡಿಕೊಳ್ಳದ ಬಾಲಕ‌ ಸೈಯದ್ ಶಾಹೀಲ್ ನಿನ್ನೆ ರಾತ್ರಿ ಕೂಡ ಟಿವಿ ನೋಡುತ್ತಿದ್ದು ಇದನ್ನು ನೋಡಿದ

ತಂದೆ ಬೈದಿದ್ದಾರೆ.

ಇದರಿಂದ ತೀವ್ರ ಮನನೊಂದ ಸೈಯದ್ ಶಾಹೀಲ್ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ರಾತ್ರಿ 10 ಸುಮಾರಿಗೆ ಚಾಕುವಿನಿಂದ ಹೊಟ್ಟೆ ಹಾಗೂ ಕತ್ತಿಗೆಗೆ ಇರಿದು ಕೊಂಡಿದ್ದಾನೆ.

ಗಂಭೀರವಾಗಿ ಗಾಯಗೊಂಡು ಒದ್ದಾಡುತ್ತಿದ್ದ  ಸೈಯದ್ ಶಾಹೀಲ್ ನನ್ನು ತಕ್ಷಣವೇ  ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಜೆಜೆನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Join Whatsapp