ಕೊಡಗು: ವಾಮಾಚಾರ ನಡೆಸಿ ನಿಧಿ ಶೋಧ; ಇಬ್ಬರು ಆರೋಪಿಗಳು ವಶಕ್ಕೆ

Prasthutha|

ಮಡಿಕೇರಿ: ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರ  ಚೆನ್ನಯ್ಯನಕೋಟೆ  ಹೊಳಮಾಳ ಗ್ರಾಮದಲ್ಲಿ ವಾಮಾಚಾರ ನಡೆಸಿ  ನಿಧಿ ಶೋಧನೆ ನಡೆಸುತ್ತಿದ್ದ ವ್ಯಕ್ತಿಗಳಿಬ್ಬರನ್ನು  ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -

ನಿಧಿ ಶೋಧನೆಯಲ್ಲಿ ತೊಡಗಿದ್ದ  ಎಂ.ಆರ್ ಗಣೇಶ್ ಹಾಗೂ ಉಡುಪಿ ಮೂಲದ ಸಾದಿಕ್ ಎಂಬವರನ್ನುಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳಿಬ್ಬರು ಮಂಗಳೂರು  ಹಾಗೂ ಕೇರಳ ಮೂಲದ  ವಾಮಾಚಾರಿಗಳ  ಬಲೆಗೆ  ಬಿದ್ದು  ಮೌಢ್ಯತೆಯಿಂದ  ಮನೆಯ ಬೆಡ್ ರೂಂನ ನೆಲದ ಅಡಿಯಲ್ಲಿ  ನಿಧಿ ಇದೆಯೆಂದು ಸುಮಾರು  15 ಅಡಿಗಳಷ್ಟು  ಗುಂಡಿತೋಡಿದ್ದಾರೆ. ನಿಧಿ ಶೋಧನೆಯ  ಸಂಬಂಧ ಕೋಳಿ ಬಲಿ ಪೂಜೆ ನಡೆಸಿದ್ದು,  ಮುಂದಿನ ದಿನಗಳಲ್ಲಿ  ದೊಡ್ಡ ಬಲಿ ಪೂಜೆ  ನಡೆಸಲು  ನಿರ್ಧರಿಸಲಾಗಿತ್ತೆಂದು  ಆರೋಪಿ ಗಳು ಹೇಳಿದ್ದಾರೆ. ಇವರು ಸೆರೆ ಆಗುವುದರೊಂದಿಗೆ  ಮುಂದೆ  ನಡೆಯಬಹುದಾಗಿದ್ದ  ಭಾರಿ ಅನಾಹುತ ತಪ್ಪಿದಂತಾಗಿದೆ. ತಲೆಮರೆಸಿಕೊಂಡ  ಆರೋಪಿಗಳ ಪತ್ತೆ ಕಾರ್ಯಮುಂದುವರಿದಿದೆ.

Join Whatsapp