ಮಗ ಆತ್ಮಹತ್ಯೆ: ಸೊಸೆಯನ್ನು ಕೊಡಲಿಯಿಂದ ಹೊಡೆದು ಕೊಂದ ಮಾವ !

Prasthutha|

ಹೈದರಾಬಾದ್: ಮಗ ಆತ್ಮಹತ್ಯೆ ಮಾಡಿಕೊಂಡ ಎಂದು ತಂದೆಯೊಬ್ಬ ಮನನೊಂದು, ಸೊಸೆಯನ್ನು  ಕೊಡಲಿಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ತೆಲಂಗಾಣದ ಮಂಚೇರಿಯಲ್‍ ನಲ್ಲಿ ನಡೆದಿದೆ.

- Advertisement -

ಸೌಂದರ್ಯ ಕೊಲೆಯಾದ ಯುವತಿ ಎಂದು ತಿಳಿದು ಬಂದಿದೆ.

ಸಾಯಿಕೃಷ್ಣ ಮತ್ತು ಸೌಂದರ್ಯ ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಬೇರೆ ಬೇರೆ ಜಾತಿಯವರಾಗಿದ್ದ ಕಾರಣ ಇವರ ಮದುವೆಗೆ ಕುಟುಂಬಸ್ಥರು ಒಪ್ಪಿಗೆ ನೀಡಿರಲಿಲ್ಲ. ಐದು ತಿಂಗಳ ಹಿಂದೆ ಮದುವೆಯಾಗಿದ್ದ ಈ ಜೋಡಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು.

- Advertisement -

ಸಾಯಿ ಕೃಷ್ಣ ಮದ್ಯಪಾನ ಮಡುತ್ತಿದ್ದನು. ಕೌಟುಂಬಿಕ ಕಲಹದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದನು. ಸಾಯಿಕೃಷ್ಣ ಮೃತನಾದ ಬಳಿಕ ಸೌಂದರ್ಯ ತನ್ನ ತವರು ಮನೆ ಸೇರಿದ್ದಳು. ಮಗನನ್ನು ಕಳೆದುಕೊಂಡ ಸಾಯಿಕೃಷ್ಣನ ತಂದೆ, ಇಷ್ಟಕ್ಕೆಲ್ಲ ಸೌಂದರ್ಯ ಕಾರಣ ಎಂದು ಆಕೆ ಇರುವ ಸ್ಥಳಕ್ಕೆ ಹೋಗಿ ಗಲಾಟೆ ಮಾಡಿದ್ದಾನೆ. ಈ ವೇಳೆ ಸೌಂದರ್ಯಗೆ ಕೊಡಲಿಯಿಂದ ಹೊಡೆದು ಪರಾರಿಯಾಗಿದ್ದಾನೆ. ಸೌಂದರ್ಯ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

Join Whatsapp