ಕೆಂಪುಕೋಟೆ ದಾಂಧಲೆ ನಡೆಸಿದ ಆರೋಪದ ನಟ ದೀಪ್ ಸಿಧು ನಾಪತ್ತೆ | ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ

Prasthutha|

ನವದೆಹಲಿ : ಗಣರಾಜ್ಯೋತ್ಸವ ದಿನ ದೆಹಲಿಯ ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿ ಕೋಲಾಹಲಕ್ಕೆ ಕಾರಣನಾಗಿದ್ದ ಬಿಜೆಪಿ ಬೆಂಬಲಿಗ ನಟ ದೀಪ್ ಸಿಧು ಮತ್ತು ಇತರರ ಬಂಧನಕ್ಕೆ ಅಗತ್ಯ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ.

- Advertisement -

ಬೂಟಾ ಸಿಂಗ್, ಸುಖದೇವ್ ಸಿಂಗ್ ಸೇರಿದಂತೆ ಇನ್ನಿಬ್ಬರ ಕುರಿತು ಮಾಜಿತಿ ನೀಡಿದವರಿಗೂ 50,000 ಬಹುಮಾನ ನೀಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದರೆ.

ಬಿಜೆಪಿ ಸರಕಾರಗಳ ಕೃಷಿ ಕಾನೂನು ರದ್ದುಪಡಿಸಬೇಕೆಂದು ಒತ್ತಾಯಿಸಿ ಕಳೆದ ಎರಡು ತಿಂಗಳುಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಜ.26ರಂದು ರೈತರು ಹೋರಾಟ ತೀವ್ರಗೊಳಿಸಿದ್ದ ವೇಳೆ, ಬಿಜೆಪಿ ಕಾರ್ಯಕರ್ತ ದೀಪ್ ಸಿಧು ನೇತೃತ್ವದಲ್ಲಿ ಕೆಂಪುಕೋಟೆ ಹತ್ತಿ ಸಿಖ್ ಧ್ವಜ ಹಾರಿಸಿ ದಾಂಧಲೆ ನಡೆಸಲಾಗಿತ್ತು..

Join Whatsapp