ರೈತನ ಮೇಲೆ ಹೊಡೆಯುತ್ತಿರುವ ಭದ್ರತಾ ಸಿಬ್ಬಂದಿ | ಈ ಫೋಟೊ ತೆಗೆದ ಫೋಟೊಗ್ರಾಫರ್ ಮೇಲೆ ಹಲ್ಲೆ

Prasthutha|

ನವದೆಹಲಿ : ರೈತರ ಪ್ರತಿಭಟನೆಯ ವೇಳೆ ಪೊಲೀಸರು ವಯೋವೃದ್ಧ ರೈತರೊಬ್ಬರ ಮೇಲೆ ಲಾಠಿ ಬೀಸುತ್ತಿರುವ ಫೋಟೊವೊಂದು ವೈರಲ್ ಆಗಿತ್ತು. ಬಹುತೇಕ ನೀವೂ ಆ ಫೋಟೊ ನೋಡಿದ್ದಿರಬಹುದು. ಆದರೆ, ಈಗ ಆ ಫೋಟೊ ತೆಗೆದ ಫೋಟೊ ಪತ್ರಕರ್ತನ ಮೇಲೆ ದುಷ್ಕರ್ಮಿಗಳ ಗುಂಪೊಂದರಿಂದ ದಾಳಿ ನಡೆದಿದೆ.

- Advertisement -

ದೆಹಲಿ ನಿವಾಸಿ ಫೋಟೊ ಪತ್ರಕರ್ತ ರವಿ ಚೌಧರಿ, ತಮ್ಮ ಮೇಲಾದ ದಾಳಿಯ ಬಗ್ಗೆ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ನಾನು ಬೈಕ್ ನಲ್ಲಿ ಹೋಗುತ್ತಿದ್ದಾಗ ಬೊಲೆರೊ ವಾಹನದಲ್ಲಿ ಬಂದ 5-6 ದುಷ್ಕರ್ಮಿಗಳು ನನ್ನ ಮೇಲೆ ದಾಳಿ ನಡೆಸಿದ್ದಾರೆ ಎಂದು ರವಿ ಹೇಳಿಕೊಂಡಿದ್ದಾರೆ.

ಈ ಘಟನೆ ಕುರಿತು ಮುರಾದ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದರೆ, ಎಫ್ ಐಆರ್ ದಾಖಲಿಸಲು ಪೊಲೀಸರು ನಿರಾಕರಿಸಿದ್ದಾರೆ ಎಂದು ರವಿ ಬೇಸರ ವ್ಯಕ್ತಪಡಿಸಿದ್ದಾರೆ.

- Advertisement -

ಪಿಟಿಐ ಫೋಟೊ ಜರ್ನಲಿಸ್ಟ್ ಆಗಿರುವ ರವಿ ಚೌಧರಿಯವರ ಫೋಟೊ ದೇಶಾದ್ಯಂತ ವೈರಲ್ ಆಗಿದ್ದು, ಬಿಜೆಪಿ ಸರಕಾರದ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿತ್ತು.  

https://twitter.com/choudharyview/status/1335931367629094913
Join Whatsapp