ಪ್ರೇಮ ವೈಫಲ್ಯ: ಮಧ್ಯಪ್ರದೇಶದಲ್ಲಿ ಕೊಡಗು ಮೂಲದ ಯುವಕ ಆತ್ಮಹತ್ಯೆ

Prasthutha|

ಮಡಿಕೇರಿ: ಪ್ರೇಮ ವೈಫಲ್ಯ ಹಿನ್ನೆಲೆ ಕೊಡಗು ಮೂಲದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯ ಪ್ರದೇಶದ ಸಿಂಗ್ರೋಳ್ಳಿ ನಡೆದಿದೆ.

- Advertisement -


ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸುಳುಗೋಡಿನ ದರ್ಶನ್ (28) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಮಧ್ಯಪ್ರದೇಶದ ಸಿಂಗ್ರೋಳ್ಳಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದನು ಎಂದು ತಿಳಿದು ಬಂದಿದೆ.


ದರ್ಶನ್, ತನ್ನ ಊರಿನ ದಿವ್ಯ ಎನ್ನುವ ಯುವತಿಯನ್ನು 8 ವರ್ಷಗಳಿಂದ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ ದರ್ಶನ್ ಜೊತೆ ವಿವಾಹ ನಿರಾಕರಿಸಿ ದಿವ್ಯಾ ಕಳೆದ ನಾಲ್ಕು ತಿಂಗಳಿನಿಂದ ಪೊಲೀಸ್ ಒಬ್ಬರನ್ನು ಪ್ರೀತಿಸುತ್ತಿದ್ದರು. ಆಕೆಯ ಈ ನಡೆಯಿಂದ ತೀವ್ರ ಮನನೊಂದಿದ್ದ ದರ್ಶನ್ ಸಾವಿಗೆ ಶರಣಾಗಿದ್ದಾನೆ.

- Advertisement -


ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಡೆತ್ ನೋಟ್ ಬರೆದಿರುವ ದರ್ಶನ್, ತನ್ನ ಸಾವಿಗೆ ದಿವ್ಯಾ ಮತ್ತು ಮನೆಯವರು ಕಾರಣ ಎಂದು ಉಲ್ಲೇಖ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

Join Whatsapp