ಅಭಿಪ್ರಾಯ ಹೇಳಲು ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸ್ವತಂತ್ರರು : ಸಿದ್ದರಾಮಯ್ಯ

Prasthutha|

ಬಳ್ಳಾರಿ : ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕೆಂದು ಶಾಸಕರ ಮತ್ತು ಜನರ ಕೂಗು ಇರಬಹುದು . ಅದು ಅವರ ವೈಯಕ್ತಿಕ ಅಭಿಪ್ರಾಯ. ಪಕ್ಷದ ಅಭಿಪ್ರಾಯ ಅಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಮತ್ತೆ ಸಿಎಂ ಆಗುತ್ತೇನೆಂದು ನಾನು ಹೇಳಿದ್ನಾ ಎಂದೂ ಅವರು ಪ್ರಶ್ನಿಸಿದ್ದಾರೆ..

- Advertisement -

ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಬಹುದು. ಅಭಿಪ್ರಾಯ ಹೇಳಲು ಎಲ್ಲರೂ ಸ್ವತಂತ್ರರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಸಂಡೂರು ತಾಲೂಕಿನ ತೋರಣಗಲ್ಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕೆಂದು ಜನರ ಮತ್ತು ಶಾಸಕರ ಕೂಗು ಇರಬಹುದು. ಆದರೆ ಹಾಗಂತ ನಾನು ಅವರಿಗೆ ಹೇಳಿ ಎಂದು ಹೇಳಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಒಂದು ನಿಯಮವಿದೆ. ಚುನಾವಣೆ ಅಗಬೇಕು, ಪಕ್ಷ ಮೆಜಾರಿಟಿಗೆ ಬರಬೇಕು. ಆಗ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ ಎಂದು ವಿವರಿಸಿದ್ದ ಸಿದ್ದರಾಮಯ್ಯ, ಪಕ್ಷದ ವೇದಿಕೆಯಲ್ಲಿ ಈ ಅಭಿಪ್ರಾಯದ ಕುರಿತಾಗಿ ಚರ್ಚೆ ಆಗಿಲ್ಲ, ಇದು ಮಹತ್ವ ವಿಚಾರವೇ ಅಲ್ಲ ಎಂದರು.

- Advertisement -

ಚಾಮರಾಜನಗರದ ದುರಂತದಲ್ಲಿ 36 ಜನ ಆಕ್ಸಿಜನ್ ಇಲ್ಲದೆ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆದರೆ ಮೂರು ಜನ ಎಂದು ರಾಜ್ಯ ಸರಕಾರ ಸುಳ್ಳು ಹೇಳಿದೆ. ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗಿದೆ. ಸಕಾಲಕ್ಕೆ ಐಸಿಯು ಬೆಡ್ ಕೊಡದೇ ಜನ ಸಾವಿಗೀಡಾಗುತ್ತಿದ್ದಾರೆ. ಆಕ್ಸಿಜನ್ ಕೊರತೆ ಇದ್ದದ್ದು ಸತ್ಯವೋ ಸುಳ್ಳೋ? ಸತ್ತವರ ಸಂಖ್ಯೆ ಬಗ್ಗೆ ಏಕೆ ಸುಳ್ಳು ಹೇಳಿದ್ದಾರೆ? ಡೆತ್ ಆಡಿಟ್ ಅಗಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು

ರಮೇಶ್ ಜಾರಕಿಹೊಳಿಯನ್ನು ಬಂಧಿಸಲಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ಸರಕಾರ ರಕ್ಷಿಸುತ್ತಿದೆ. ಈ ಸರಕಾರದಲ್ಲಿ ರಮೇಶ್ ಜಾರಕಿಹೊಳಿಗೊಂದು ನ್ಯಾಯ, ಮತ್ತೊಬ್ಬರಿಗೊಂದು ನ್ಯಾಯವೇ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಮೊದಲು ರಮೇಶ್ ಜಾರಕಿಹೊಳಿ ಬಂಧಿಸಲಿ ಎಂದು ಆಗ್ರಹಿಸಿದರು.
ಪ್ರಸ್ತುತ ದರಕ್ಕೆ ಭೂಮಿ ಕೊಡಲಿ: ಜಿಂದಾಲ್ ಉಕ್ಕು ಕಾರ್ಖಾನೆಗೆ ಜಮೀನು ಪರಭಾರೆ ವಿಷಯವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಪ್ರಸ್ತುತ ಮಾರುಕಟ್ಟೆ ದರಕ್ಕೆ ಭೂಮಿ ಕೊಡೋದಾದರೆ ಕೊಡಲಿ. ಅದು ಬಿಟ್ಟು ಈ ಹಿಂದೆ ಒಪ್ಪಂದ ಮಾಡಿಕೊಂಡಿರುವ ದರಕ್ಕೆ ಕೊಡೋದು ಸರಿಯಲ್ಲ. ಈ ವಿಷಯದಲ್ಲಿ ಕೇಂದ್ರ ಸರಕಾರ ಮಧ್ಯೆ ಪ್ರವೇಶಿಸಿದೆ ಅಂದರೆ ಏನೆಂದು ಅರ್ಥೈಸಿಕೊಳ್ಳಬೇಕು ಎಂದರು.

Join Whatsapp