ಶಿವಮೊಗ್ಗವನ್ನು ಗಲಭೆ, ಗದ್ದಲಗಳ ನಾಡನ್ನಾಗಿ ಮಾಡಿದ್ದು ಈಶ್ವರಪ್ಪ : ಹೆ‍ಚ್ ಎಸ್ ಸುಂದರೇಶ್

Prasthutha|

- Advertisement -

ಶಿವಮೊಗ್ಗ: ಸೌಹಾರ್ದಯುತ ನಾಡಾದ ಶಿವಮೊಗ್ಗದಲ್ಲಿ ಗಲಭೆ, ಗದ್ದಲಗಳ ದುಸ್ಥಿತಿಯುಂಟಾಗಲು ಬಿಜೆಪಿ ನಾಯಕ ಈಶ್ವರಪ್ಪ ನೇರ ಕಾರಣ ಎಂದು ಕಾಂಗ್ರೆಸ್ ಶಿವಮೊಗ್ಗ ಜಿಲ್ಲಾಧ್ಯಕ್ಷ ಹೆಚ್ ಎಸ್ ಸುಂದರೇಶ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸುಂದರೇಶ್ ‘ಈಶ್ವರಪ್ಪರವರು ಯಡಿಯೂರಪ್ಪ ತರಹದ ರಾಜಕಾರಣಿಯೇ ಅಲ್ಲ. ಈಶ್ವರಪ್ಪ ಅರವತ್ತು ವರುಷ ಕಳೆದ ಮೇಲೆ ಅರಳೋ – ಮರಳೋ ತರ ಆಗಿದ್ದಾರೆ. 25 ವರ್ಷಗಳಿಂದ ಕೋಮುಗಲಭೆಗಳ ಮೂಲಕನೇ ರಾಜಕಾರಣ ಮಾಡಿದ್ದಾರೆ ‘ ಎಂದು ಹರಿಹಾಯ್ದಿದ್ದಾರೆ.

- Advertisement -

ಶಿವಮೊಗ್ಗದಲ್ಲಿ ಕೋಮುಗಲಭೆಗಳು ವ್ಯಾಪಕಗೊಳ್ಳುತ್ತಿದೆ. ಈಶ್ವರಪ್ಪರವರ ಕೋಮು ವಿರೋಧಿ ಮನೋಭಾವದ ನಡೆಯೇ ಇದಕ್ಕೆ ನೇರ ಕಾರಣ. ಸುಮಾರು ಐದು ಬಾರಿ ಶಾಸಕರಾದ ಈಶ್ವರಪ್ಪ ಹಿರಿಯರೂ ಆಗಿದ್ದಾರೆ. ಆದರೆ ಅವರ ರಾಜಕಾರಣವು ಕೋಮು ರಾಜಕಾರಣ. ಆಕ್ರೋಶಕಾರಿ ಭಾಷಣಗಳ ಮೂಲಕ ಉದ್ರೇಕಗೊಳಿಸುತ್ತಾರೆ. ಅವರು 25 ವರ್ಷದಿಂದಲೂ ಇದೇ ರೀತಿ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ನಾಚಿಕೆ ಮಾನ-ಮರ್ಯಾದೆಯೇ ಇಲ್ಲ ಎಂದು ಈಶ್ವರಪ್ಪ ವಿರುದ್ಧ ಕಿಡಿಕಾರಿದ್ದಾರೆ.

Join Whatsapp