ಆಂಧ್ರ ಪ್ರದೇಶದಲ್ಲೊಂದು ವಿಚಿತ್ರ ಸಾಂಕ್ರಾಮಿಕ ಕಾಯಿಲೆ | ಓರ್ವ ಬಲಿ, 290 ಮಂದಿ ಆಸ್ಪತ್ರೆಗೆ ದಾಖಲು

Prasthutha|

ಹೈದರಾಬಾದ್ : ಕೊರೊನದಿಂದ ಇಡೀ ಜಗತ್ತೇ ತತ್ತರಿಸಿರುವಾಗ, ಇದೀಗ ಆಂಧ್ರ ಪ್ರದೇಶದಲ್ಲಿ ಹೊಸದೊಂದು ಕಾಯಿಲೆ ಕಾಣಿಸಿಕೊಂಡಿದ್ದು, ಈ ಕಾಯಿಲೆಗೆ ಒಬ್ಬ ಬಲಿಯಾಗಿದ್ದಾರೆ ಮತ್ತು 290ಕ್ಕೂ ಹೆಚ್ಚು ಜನ ಏಕಕಾಲಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

- Advertisement -

ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ಈ ವಿಚಿತ್ರ ಕಾಯಿಲೆ ಕಾಣಿಸಿಕೊಂಡಿದೆ. ಗೋದಾವರಿ ಜಿಲ್ಲೆಯ ಎಲೂರು ಪಟ್ಟಣದಲ್ಲಿ ಇದ್ದಕ್ಕಿದ್ದಂತೆ ಜನರು ಬಾಯಿಯಲ್ಲಿ ನೊರೆಬಂದು, ವಾಂತಿ, ಪ್ರಜ್ಞಾಹೀನರಾಗಿ ಬಿದ್ದಿರುವ ಘಟನೆಗಳು ನಡೆದಿವೆ.

ಮೂರ್ಛೆ ರೋಗದ ಲಕ್ಷಣವಿರುವ ಈ ಕಾಯಿಲೆಯು ಸಾಂಕ್ರಾಮಿಕವಾಗಿ ಹರಡುತ್ತಿದ್ದು, ವೈದ್ಯರು ಮತ್ತು ತಜ್ಞರಿಗೆ ತಲೆಕೆಡಿಸಿಕೊಳ್ಳುವಂತೆ ಮಾಡಿದೆ.

- Advertisement -

ಆಸ್ಪತ್ರೆಗೆ ದಾಖಲಾದವರಲ್ಲಿ ಕೆಲವರು ಬಿಡುಗಡೆಯಾಗಿದ್ದು, ಇಂದು ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ರೋಗಿಗಳನ್ನು ಭೇಟಿಯಾಗಲಿದ್ದಾರೆ.

Join Whatsapp