ಮೊಟ್ಟೆ ಹಗರಣದ ರೂವಾರಿ ಶಶಿಕಲಾ ಜೊಲ್ಲೆಗೂ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ!

Prasthutha|

ಬೆಂಗಳೂರು: ಮೊಟ್ಟೆ ಹಗರಣದ ರೂವಾರಿ ಶಶಿಕಲಾ ಜೊಲ್ಲೆ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಪಡೆದಿದ್ದಾರೆ.

- Advertisement -

ಗರ್ಭಿಣಿಯರಿಗೆ ಮತ್ತು ಅಪೌಷ್ಠಿಕ ಮಕ್ಕಳಿಗೆ ನೀಡಲಾಗುವ ‘ಮಾತೃಪೂರ್ಣ’ ಮೊಟ್ಟೆ ವಿತರಿಸಲು ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಸಲು ಯಡಿಯೂರಪ್ಪ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಶಶಿಕಲಾ ಜೊಲ್ಲೆ ಮುಂದಾಗಿದ್ದರು.

ಕುಟುಕು ಕಾರ್ಯಾಚರಣೆ ನಡೆಸಿದ್ದ ಕನ್ನಡ ಸುದ್ದಿ ವಾಹಿನಿ ಜೊತೆ ಮಾತನಾಡಿದ ಸಚಿವೆ ನಿಮಗೆ ಟೆಂಡರ್ ಬೇಕಾದರೆ ಹಣಕಾಸು ವ್ಯವಹಾರ ಚಿಕ್ಕೋಡಿಯಲ್ಲಿರುವ ಸಹೋದರ ಸಂಜಯ್ ಅರಗಿ ಜೊತೆ ಮಾತನಾಡಿ 25 ಲಕ್ಷ ರೂ. ನೀಡುವಂತೆ ಸೂಚನೆ ಕೊಟ್ಟಿದ್ದರು. ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ, ಎಂದಿನಂತೆ ಹಿಂದಿನ ಚಾಳಿ ಮುಂದುವರಿಸಿದೆ.

Join Whatsapp