ಚಿಲ್ಲರೆ ಹೇಳಿಕೆಗಳಿಗೆ ಪ್ರತಿಕ್ರಿಯಿಸಲ್ಲ: ಹೆಚ್ ಡಿಡಿ ವಿರುದ್ಧ ಡಿಕೆಶಿ ಕಿಡಿ

Prasthutha|

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ವಿರುದ್ಧ ಡಿಕೆ ಶಿವಕುಮಾರ್ ಕೆಂಡಾಮಂಡಲ ಆಗಿದ್ದು ಚಿಲ್ಲರೆ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.

- Advertisement -

9 ವರ್ಷದ ಹೆಣ್ಣು ಮಗಳನ್ನು ತೆಗೆದುಕೊಂಡು ಹೋಗಿ ಜಮೀನನ್ನು ಬರೆಸಿಕೊಂಡರು ಎಂಬ ಆರೋಪವನ್ನು ಚಿಲ್ಲರೆ ಎಂದ ಡಿಕೆಶಿ, ದಾಖಲೆ ಇದ್ದರೆ ಬಿಡುಗಡೆ ಮಾಡಲಿ, ತಪ್ಪು ಮಾಡಿದರೆ ನಾನು ಯಾವುದೇ ಶಿಕ್ಷೆಗೂ ರೆಡಿ ಇದ್ದೇನೆ ಎಂದು ದೇವೇಗೌಡರಿಗೆ ಸವಾಲು ಹಾಕಿದ್ದಾರೆ. ನಾನು ಏನು ಮೂರ್ಖನಲ್ಲ, ಚಿಲ್ಲರೆ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡಲ್ಲ. ಅದರ ಬಗ್ಗೆ ಇನ್ನೊಂದು ವೇದಿಕೆಯಲ್ಲಿ ಚರ್ಚೆ ಮಾಡೋಣ ಎಂದು ಡಿಕೆಶಿ ಟಾಂಗ್ ಕೊಟ್ಟರು.

Join Whatsapp