ತಾಯಿಯನ್ನು ಬಿಟ್ಟು ಕೊಡಲ್ಲ: ಸುಮಲತಾ ಪರ ಪ್ರಚಾರದ ಸುಳಿವು ನೀಡಿದ ನಟ ದರ್ಶನ್

Prasthutha|

ಮಂಗಳೂರು: ಹೆತ್ತ ತಾಯಿಯನ್ನ ಬಿಟ್ಟು ಕೊಡಕ್ಕೆ ಆಗುತ್ತಾ ಈ ಹಿಂದೆಯೂ ಅವರ ಜೊತೆಗೆ ನಿಂತಿದ್ದೆ. ಯಾವಾಗಲೂ ನಮ್ಮ ಅಮ್ಮನ ಜೊತೆ ಇರುತ್ತೇನೆ. ನಿಮ್ಮ ಮನೆಯಲ್ಲಿ ನಿಮ್ಮ ತಾಯಿನ ಬಿಟ್ಟು ಬಿಡ್ತೀರಾ? ಅಮ್ಮ ಅಮ್ಮನೇ ಅಲ್ವಾ ಎಂದು ನಟ ದರ್ಶನ್ ಸಂಸದೆ ಸುಮಲತಾ ಅಂಬರೀಷ್ ಪರ ಪ್ರಚಾರಕ್ಕೆ ಮತ್ತೆ ಸಿದ್ಧ ಎಂದು ತಿಳಿಸಿದ್ದಾರೆ.

- Advertisement -

ಕತ್ತಾರಿನ ಕೊರಗಜ್ಜನ ಕ್ಷೇತ್ರಕ್ಕೆ ನಟ ದರ್ಶನ್ ಭೇಟಿ ಕೊಟ್ಟಿದ್ದು, ಈ ಸಂದರ್ಭ ಸಮಲತಾ ಅಂಬರೀಶ್ ಪರ ಚುನಾವಣೆ ಪ್ರಚಾರ ಮಾಡುವುದರ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಮಂಡ್ಯ ಕ್ಷೇತ್ರದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಏಕೆಂದರೆ ಒಂದು ಕಡೆ ಸುಮಲತಾ ಅಂಬರೀಷ್ ಟಿಕೇಟ್ ನಂಗೆ ಸಿಗುವ ವಿಶ್ವಾಸವಿದೆ ಎಂದಿದ್ದಾರೆ. ಇನ್ನೊಂದು ಕಡೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಆಗಿರುವ ಹಿನ್ನೆಲೆಯಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎನ್ನುವುದರ ಕುರಿತು ಬಿಜೆಪಿಯನ್ನು ಗೊಂದಲದಲ್ಲಿದೆ.ಏಕೆಂದರೆ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಅವರು ಗೆದ್ದಿದ್ದರು. ಹೀಗಾಗಿ ಈ ಬಾರಿ ಕೂಡ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Join Whatsapp