ನನ್ನನ್ನು ಬಂಧಿಸುವ ಧೈರ್ಯ ಇದೆಯೇ: ಅಶೋಕ್‌ ಸವಾಲ್

Prasthutha|

ಬೆಂಗಳೂರು: ಸಿದ್ದರಾಮಯ್ಯ ಸರಕಾರವು ಹಿಂದೂ ಕಾರ್ಯಕರ್ತರನ್ನು ಹುಡುಕಿ ಹುಡುಕಿ ಬಂಧಿಸುತ್ತಿದೆ ಎಂದು ಆರೋಪಿಸಿದ ವಿಪಕ್ಷ ನಾಯಕ ಆರ್ ಅಶೋಕ್, ಹುಬ್ಬಳ್ಳಿಯಲ್ಲಿ 30 ವರ್ಷಗಳ ಹಿಂದೆ ನಡೆದಿದ್ದ ರಾಮ ಮಂದಿರ ಪರ ಪ್ರಕರಣವನ್ನಿಟ್ಟುಕೊಂಡು ಇಬ್ಬರು ಹಿಂದೂ ಕಾರ್ಯಕರ್ತರನ್ನು ಬಂಧಿಸಿದೆ. ನಾನೂ ಅದೇ ಹೋರಾಟ ಮಾಡಿದ್ದೀನಿ, ರಾಮಮಂದಿರ ಆಗಬೇಕೆಂಬ ಹೋರಾಟದಲ್ಲಿ ನಾನೂ ಭಾಗವಹಿಸಿದ್ದೆ.ನನ್ನನ್ನು ಬಂಧಿಸುವ ಧೈರ್ಯ ಈ ಸರಕಾರಕ್ಕೆ ಇದೆಯೇ ಎಂದು ಸವಾಲ್ ಹಾಕಿದ್ದಾರೆ.

- Advertisement -

ಪ್ರಸ್ತುತ ಬಂಧನ ಕುರಿತು ಸ್ಪಷ್ಟನೆ ನೀಡಿರುವ ಗೃಹಸಚಿವ ಡಾ| ಜಿ. ಪರಮೇಶ್ವರ್‌, ವರ್ಷಗಳಿಂದ ಜೀವಂತವಾಗಿದ್ದ ಕೆಲವು ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ಪೊಲೀಸರಿಗೆ ಸರಕಾರ ಸೂಚನೆ ಕೊಟ್ಟಿತ್ತು. ಹುಬ್ಬಳ್ಳಿಯಲ್ಲಿ 32 ಪ್ರಕರಣಗಳು ಇದೇ ರೀತಿ ಬಾಕಿ ಇದ್ದವು. ಅವುಗಳನ್ನು ಇತ್ಯರ್ಥಪಡಿಸುವಾಗ ಆಕಸ್ಮಿಕವಾಗಿ ಈ ಪ್ರಕರಣವೂ ಬಂದಿದೆ.ಉದ್ದೇಶಪೂರ್ವಕವಾಗಿ ಯಾರನ್ನೂ ಗುರಿ ಮಾಡಿಲ್ಲ. ಆದರೆ, ಬಿಜೆಪಿಯವರು ಈ ರೀತಿ ಬಣ್ಣ ಕಟ್ಟುವುದು ಸರಿಯಲ್ಲ ಎಂದಿದ್ದಾರೆ.

- Advertisement -

Join Whatsapp