ಭಜನಾ ಮಂದಿರದ ಜಾಗದ ತಕರಾರು; ಇತ್ತಂಡಗಳ ಹೊಡೆದಾಟ,ದೂರು ದಾಖಲು

Prasthutha|

ಪುತ್ತೂರು: ಭಜನಾ ಮಂದಿರದ ಜಾಗದ ವಿಷಯಕ್ಕೆ ಸಂಬಂಧಿಸಿ ಇತ್ತಂಡಗಳ ನಡುವೆ ಮಾರಾಮಾರಿ ನಡೆದಿದ್ದು,ಹಲವರಿಗೆ ಗಾಯಗಳಾದ ಘಟನೆ ಆರ್ಯಾಪು ಗ್ರಾಮದ ದೊಡ್ಡಡ್ಕ ಎಂಬಲ್ಲಿ ನಡೆದಿದೆ.

- Advertisement -

ಭಜನಾ ಮಂಡಳಿ ಜಾಗದ ವಿಷಯಕ್ಕೆ ಸಂಬಂಧಿಸಿ ಎರಡು ತಂಡಗಳ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಹಲ್ಲೆಗೈದಿದ್ದು, ಸರೋಜಿನಿ ಆಚಾರ್ಯ(68) ಎಂಬ ಮಹಿಳೆ  ಮತ್ತು ಅವರ ಪುತ್ರ ನಾರಾಯಣ ಆಚಾರ್ಯ (35)ಎಂಬವರಿಗೆ ಹುಲ್ಲು ತೆಗಿಯುವ ಮೆಷಿನ್  ನಿಂದ ಹಲ್ಲೆಗೈದ ಪರಿಣಾಮ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮತ್ತೊಂದು ತಂಡದ ಪೂವಪ್ಪ ನಾಯ್ಕ್ ಮತ್ತು ಅವರ ಪತ್ನಿಯನ್ನುಜಾತಿ ನಿಂದನೆ ಮಾಡಿ  ಮಾರಕಾಯುಧಗಳಿಂದ  ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎನ್ನಲಾಗಿದೆ.

- Advertisement -

ಎರಡು ತಂಡದವರೂ ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Join Whatsapp