ಹಣಕಾಸು ಸಚಿವರನ್ನು ವಜಾಗೊಳಿಸಿ ಎಂದ ರಾಜ್ಯಪಾಲ:
ಅದು ಸಾಧ್ಯವಿಲ್ಲ ಎಂದ ಸಿಎಂ ಪಿಣರಾಯಿ

Prasthutha|

ತಿರುವನಂತಪುರ : ಕೇರಳ ರಾಜ್ಯದಲ್ಲಿ ಗವರ್ನರ್ ಮತ್ತು ಮುಖ್ಯಮಂತ್ರಿಯ ನಡುವೆ ವಾಗ್ವಾದಗಳು ಉಲ್ಬಣಗೊಂಡಿದ್ದು, ಇದರ ಮುಂದುವರಿದ ಭಾಗವಾಗಿ ವಿಸಿ ಗಳ ಬಳಿಕ ಹಣಕಾಸು ಸಚಿವರನ್ನು ವಜಾಗೊಳಿಸುವಂತೆ ಕೇರಳ ರಾಜ್ಯಪಾಲ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ಪತ್ರ ಬರೆದಿದ್ದರು.

- Advertisement -

ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ರ ಈ ಕೋರಿಕೆ ಪತ್ರವನ್ನು ಸಿ ಎಂ ಪಿಣರಾಯಿ ವಿಜಯನ್ ನಿರಾಕರಿಸಿದ್ದಾರೆ.

ಸಂಪುಟದ ಯಾರೇ ಸಚಿವರುಗಳನ್ನು ವಜಾಗೊಳಿಸುವ ಅಧಿಕಾರ ರಾಜ್ಯಪಾಲರಿಗಿಲ್ಲ ಎಂದೂ ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ್ದಾರೆ.

- Advertisement -

ತಿರುವನಂತಪುರಂನ ಕ್ಯಾಂಪಸ್‌ನಲ್ಲಿ ಹಣಕಾಸು ಸಚಿವ ಕೆ ಎನ್ ಬಾಲಗೋಪಾಲ್ ರವರು ಪ್ರಾದೇಶಿಕತೆ ಮತ್ತು ಪ್ರಾಂತೀಯತೆಯ ಬೆಂಕಿಯನ್ನು ಹೊತ್ತಿಸುವ ಮತ್ತು ಭಾರತದ ಏಕತೆಯನ್ನು ಹಾಳುಮಾಡುವ ಉದ್ದೇಶವನ್ನು ಇಟ್ಟುಕೊಂಡು ಭಾಷಣ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ಬರೆದ ಪತ್ರದಲ್ಲಿ ರಾಜ್ಯಪಾಲ ಖಾನ್ ಉಲ್ಲೇಖಿಸಿದ್ದಾರೆ.

Join Whatsapp