RSS ಕಚೇರಿ ಕೇಶವ ಕೃಪವನ್ನು ಡ್ಯಾನ್ಸ್ ಬಾರ್ ಮಾಡಿ, ಸಿಟಿ ರವಿ ಆಧುನಿಕ ‘ಬೃಹನ್ನಳೆ’ ಯಂತೆ ಕುಣಿಯಲಿ: ದಿನೇಶ್ ಗುಂಡೂರಾವ್

Prasthutha|

ಬೆಂಗಳೂರು: ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾಯಿಸಲು ಆಗ್ರಹಿಸಿ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕ ಸಿಟಿ ರವಿಯ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕೆಂಡಾಮಂಡಲರಾಗಿದ್ದಾರೆ. ಹುಚ್ಚುನಾಯಿ ಕಡಿತಕ್ಕೊಳಗಾದಂತೆ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಸಿ.ಟಿ.ರವಿಯವರ ಹುಚ್ಚು ಅಂತಿಮ ಹಂತ ತಲುಪಿದ್ದು, ನಾಡಿನ ಹಿತದೃಷ್ಟಿಯಿಂದ BJP ವರಿಷ್ಠರು ಸಿ.ಟಿ.ರವಿಗೆ ಯಾವುದಾದರೂ ಉತ್ತಮ ಪಶುವೈದ್ಯ ಶಾಲೆಯಲ್ಲಿ ಚಿಕಿತ್ಸೆ ಕೊಡಿಸಲಿ ಎಂದು ಆಗ್ರಹಿಸಿದ್ದಾರೆ. ಹೇಗಿದ್ದರೂ ಬಿಜೆಪಿಯೇ ಒಂದು ಹುಚ್ಚರ ಸಂತೆ, ಮಲ್ಲೇಶ್ವರದ BJP ಕಚೇರಿಯನ್ನೇ ಹುಚ್ಚಾಸ್ಪತ್ರೆ ಮಾಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

- Advertisement -

ನೆಹರು ಹಾಗೂ ಇಂದಿರಾ ಗಾಂಧಿಯವರ ಕಾಲಿನ ಧೂಳಿಗೂ ಸಮವಿಲ್ಲದ ಸಿ.ಟಿ.ರವಿ, ನಮ್ಮ ನಾಯಕರ ಬಗ್ಗೆ ಕೀಳಾಗಿ ಮಾತನಾಡುವುದು ಅವರ ಹೀನ ಸಂಸ್ಕೃತಿಯನ್ನು ತೋರಿಸುತ್ತದೆ. ಅಲ್ಲದೇ ಕಾಂಗ್ರೆಸ್ ಕಚೇರಿಯನ್ನು ಹುಕ್ಕಾ ಬಾರ್ ಮಾಡಲು ಸಲಹೆ ಕೊಟ್ಟಿರುವ ಸಿ.ಟಿ.ರವಿಯ ವಿರುದ್ಧ ಗುಡುಗಿದ ಗುಂಡೂರಾವ್, RSS ಕಚೇರಿ ಕೇಶವ ಕೃಪವನ್ನು ‘ಡ್ಯಾನ್ಸ್ ಬಾರ್‌’ ಮಾಡಿ ಆಧುನಿಕ ‘ಬೃಹನ್ನಳೆ’ಯಂತೆ ಸಿಟಿ ರವಿ ನಾಟ್ಯ ಮಾಡುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಲು C.T.ರವಿ ಒಣ ಪೌರುಷ ತೋರಿಸುತ್ತಿದ್ದಾರೆ. ಬಿಜೆಪಿಯವಗೆ ಜನರಿಗೆ ಅನುಕೂಲವಾಗುವ ಒಂದೇ ಒಂದು ಯೋಜನೆ ತರುವ ಯೋಗ್ಯತೆಯಿಲ್ಲ. C.T.ರವಿಯವರಿಗೆ ತಾಕತ್ತಿದ್ದರೆ ಇಂದಿರಾ ಕ್ಯಾಂಟೀನ್ ಮಾದರಿಯಲ್ಲೇ ಇನ್ನೊಂದು ಯೋಜನೆ ಜಾರಿ ಮಾಡಿಸಲಿ. ಆ ಯೋಜನೆಗೆ ‘ಗೋಡ್ಸೆ’ ಹೆಸರನ್ನು ಬೇಕಾದರೂ ಇಟ್ಟುಕೊಳ್ಳಲಿ. ಬೇಡ ಎನ್ನುವವರು ಯಾರು ಎಂದು ಕುಟುಕಿದ್ದಾರೆ.

Join Whatsapp