ವಿವಾಹ ದಿನದಂದೇ ವಧುವಿನ 2 ಕೋಟಿ ಬೆಲೆಬಾಳುವ ಡೈಮಂಡ್ ಆಭರಣ ಕಳ್ಳತನ !

Prasthutha|

ಜೈಪುರ: ಮುಂಬೈ ಮೂಲದ ಉದ್ಯಮಿಯೊಬ್ಬರ ಮಗಳ ವಿವಾಹ ದಿನದಂದೇ, ಕುಟುಂಬದವರು ತಂಗಿದ್ದ ಪ್ರತಿಷ್ಠಿತ ಪಂಚತಾರ ಹೊಟೇಲ್’ನಲ್ಲಿ 2 ಕೋಟಿ, 95 ಸಾವಿರ ರು. ಮೌಲ್ಯದ ವಜ್ರದ ಆಭರಣ ಹಾಗೂ ನಗದು ಕಳ್ಳತನವಾಗಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

- Advertisement -

ಮುಂಬೈನ ಮೂಲದ ಉದ್ಯಮಿ ರಾಹುಲ್ ಭಾಟಿಯಾರ ಮಗಳ ವಿವಾಹ ಕಾರ್ಯಕ್ರಮವು ಜೈಪುರದ ಕ್ಲರ್ಕ್ಸ್ ಅಮೆರ್ ಪಂಚತಾರ ಹೊಟೇಲ್’ನಲ್ಲಿ ಆಯೋಜಿಸಲಾಗಿತ್ತು. ರಾಹುಲ್ ಭಾಟಿಯಾರ ಕುಟುಂಬವು ಹೊಟೇಲ್’ನ 7ನೇ ಅಂತಸ್ತಿನ ವಿವಿಧ ಕೊಠಡಿಯಲ್ಲಿ ತಂಗಿದ್ದರು. ಗುರುವಾರ ರಾತ್ರಿ ಹೊಟೇಲ್’ನ ಸಭಾಂಗಣದಲ್ಲಿ ವಿವಾಹ ಕಾರ್ಯಕ್ರಮವು ನೆರವೇರಿತ್ತು. ಕಾರ್ಯಕ್ರಮ ಮುಗಿಸಿ ತಾವು ತಂಗಿದ್ದ ಕೊಠಡಿಗೆ ಮರಳಿದಾಗ ಬ್ಯಾಗ್’ನಲ್ಲಿ ಇಟ್ಟಿದ್ದ ವಜ್ರದ ಆಭರಣ ಕಳ್ಳತನವಾಗಿರುವುದು ಗೊತ್ತಾಗಿದೆ. ಕೂಡಲೇ ಹೊಟೇಲ್’ನ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.

ಜವಾಹರ್ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ. ಕೊಠಡಿಯ ಬೀಗದ ಕೈ ತಮ್ಮ ಬಳಿಯೇ ಇದ್ದ ಕಾರಣ ಅಪರಿಚಿತರು ಒಳ ಪ್ರವೇಶಿಸುವ ಸಾಧ್ಯತೆ ಇಲ್ಲ. ಹೀಗಾಗಿ ಹೊಟೇಲ್’ನ ಸಿಬ್ಬಂದಿಯೇ ಒಳಸಂಚು ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಠಾಣಾಧಿಕಾರಿ ರಾಧಾ ರಮಣ್ ಗುಪ್ತಾ, ಹೊಟೇಲ್’ನ ಎಲ್ಲಾ CCTVಗಳನ್ನು ಪರಶೀಲಿಸಲಾಗುತ್ತಿದ್ದು, ಜೊತೆಗೆ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಎಂದಿದ್ದಾರೆ.

Join Whatsapp