ಯೋಗಿ ಆದಿತ್ಯನಾಥ್‌ಗೆ ದೇವಾಲಯ ನಿರ್ಮಾಣ ಮಾಡಿ ಪೂಜೆ ಮಾಡಿದ ಭಕ್ತರು!

Prasthutha|

- Advertisement -

ಅಯೋಧ್ಯೆ : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ದೇವಾಲಯ ಕಟ್ಟಿ ರಾಮನಂತೆ ಚಿತ್ರಿಸಿ ಪೂಜೆ ನಡೆಸಲಾಗಿದೆ. ದೇವಸ್ಥಾನದಲ್ಲಿ ಮುಖ್ಯಮಂತ್ರಿಗಳ ವಿಗ್ರಹದ ಮುಂದೆ ಪ್ರತಿದಿನ ಎರಡು ಬಾರಿ ಬೆಳಿಗ್ಗೆ ಮತ್ತು ಸಂಜೆ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ. ದೇವಾಲಯದಲ್ಲಿ ಬರುವ ಭಕ್ತರಿಗೆ ಪ್ರಸಾದವನ್ನು ಸಹ ವಿತರಿಸಲಾಗುತ್ತದೆ.

ರಾಮನ ಸಹೋದರ ಭರತ ವನವಾಸಕ್ಕೆ ಹೋಗುವ ಮೊದಲು ಅವನನ್ನು ಬೀಳ್ಕೊಟ್ಟ ಸ್ಥಳವೆಂದು ಇದನ್ನು ನಂಬಲಾಗಿದೆ. ಈ ದೇವಾಲಯವನ್ನು ಅಯೋಧ್ಯೆಯ ನಿವಾಸಿ ಪ್ರಭಾಕರ ಮೌರ್ಯ ನಿರ್ಮಿಸಿದ್ದಾರೆ. ಮೌರ್ಯ ಅವರು 2015ರಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸುವ ವ್ಯಕ್ತಿಯನ್ನು ಪೂಜಿಸುವ ಪ್ರತಿಜ್ಞೆಯನ್ನು ತೆಗೆದುಕೊಂಡಿದ್ದರು. ಮೌರ್ಯ ಅವರು ಯೋಗಿ ಆದಿತ್ಯನಾಥ್ ಅವರ ವಿಗ್ರಹದ ಮುಂದೆ ಭಗವಾನ್ ರಾಮನಿಗಾಗಿ ಮಾಡುವಂತೆಯೇ ಪ್ರತಿದಿನ ಸ್ತೋತ್ರಗಳನ್ನು ಪಠಿಸುವುದಾಗಿ ಹೇಳಿದರು.

- Advertisement -

ದೇವಾಲಯದ ನಿರ್ಮಾಣಕ್ಕೆ ಸುಮಾರು ₹ 8.5 ಲಕ್ಷ ವೆಚ್ಚವಾಗಿದೆ. ಯೋಗಿ ಆದಿತ್ಯನಾಥ್ ವಿಗ್ರಹವನ್ನು ರಾಜಸ್ಥಾನದಿಂದ ತಯಾರಿಸಿ ತರಲಾಗಿದೆ ಎಂದು ತಿಳಿದು ಬಂದಿದೆ.

Join Whatsapp