ಚಿಕ್ಕಮಗಳೂರು: ಗುಂಡು ಹಾರಿಸಿ ದಲಿತ ಕೂಲಿ ಕಾರ್ಮಿಕ ಮಹಿಳೆಯ ಹತ್ಯೆಗೈದು ಸುಟ್ಟುಹಾಕಿದ ಹಂತಕರು

Prasthutha|

ಚಿಕ್ಕಮಗಳೂರು: ಬಂದೂಕಿನಿಂದ ಗುಂಡು ಹಾರಿಸಿ ದಲಿತ ಕೂಲಿ ಕಾರ್ಮಿಕ ಮಹಿಳೆಯೊಬ್ಬರನ್ನು ಹತ್ಯೆ ಮಾಡಿದ ನಂತರ ಸುಟ್ಟುಹಾಕಿದ ಘಟನೆ ಚಿಕ್ಕಮಗಳೂರು ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.

- Advertisement -

ಜಯಮ್ಮ (54) ಹತ್ಯೆಯಾದ‌ ದಲಿತ ಮಹಿಳೆ. ಕಾಫಿ ಎಸ್ಟೇಟ್​​ನಲ್ಲಿ ನಡೆದಿರುವ ಮಹಿಳೆಯ ಹತ್ಯೆಯ ಹಿಂದೆ ನೂರಾರು ಅನುಮಾನಗಳು ಹುಟ್ಟಿಕೊಂಡಿವೆ.

ಸಿದ್ದಾಪುರ ಗ್ರಾಮದಲ್ಲಿ ಮಹಿಳೆಯನ್ನು ಗುಂಡಿಕ್ಕಿ ಹತ್ಯೆ ಮಾಡಿ ಸ್ಥಳದಿಂದ 2 ಕಿಮೀ ದೂರದಲ್ಲಿರುವ ಸುಪ್ರೀಮ್ ಎಸ್ಟೇಟ್​​ನಲ್ಲಿ ಹಂತಕರು ಸುಟ್ಟುಹಾಕಿ ಎಸ್ಕೇಪ್ ಆಗಿದ್ದಾರೆ. ಹತ್ಯೆ ನಡೆದು 7 ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಗ್ರಾಮಸ್ಥರು ಇಂದು ಎಸ್​ಪಿ ಉಮಾ ಪ್ರಶಾಂತ್ ಅವರಿಗೆ ಮಾಹಿತಿ ನೀಡಿದ್ದಾರೆ.

- Advertisement -

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಎಸ್​ಪಿ ಉಮಾ ಅವರು ಪರಿಶೀಲನೆ ನಡೆಸಿದ್ದು, ಎಸ್ಟೇಟ್ ಮಾಲೀಕ ‌ಹೆಗಡೆಗೌಡ, ಮಗ ಸುಪೀಂಗೌಡ ಸೇರಿದಂತೆ ಕೆಲವು ಕಾರ್ಮಿಕರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ದಲಿತ ಮಹಿಳೆಯ ಹತ್ಯೆಯ ಹಿಂದೆ ನೂರಾರು ಅನುಮಾನಗಳು ಹುಟ್ಟಿಕೊಂಡಿರುವ ಹಿನ್ನೆಲೆ ಪೊಲೀಸರು ಹತ್ಯೆಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp