ನಾಳೆ ಸಿದ್ದರಾಮಯ್ಯ ನಿವಾಸಕ್ಕೆ ದಲಿತ, ಒಕ್ಕಲಿಗ, ಮುಸ್ಲಿಮ್ ನಾಯಕರಿಂದ ಮುತ್ತಿಗೆ

Prasthutha|

ಕೋಲಾರ: ಸಿದ್ಧರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂಬ ಸುದ್ದಿಗಳಿಂದ ಬೇಸತ್ತಿರುವ ಅಲ್ಲಿನ ಹಲವು ನಾಯಕರು ನಾಳೆ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ.

- Advertisement -

ಕೋಲಾರದ ದಲಿತ, ಒಕ್ಕಲಿಗ ಹಾಗು ಮುಸ್ಲಿಂ ನಾಯಕರು ಸೇರಿ ನಾಳೆ ಬೆಂಗಳೂರಲ್ಲಿರುವ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದಾರೆ.


ಕೋಲಾರದ ಆರಾದ್ಯ ಗ್ರ್ಯಾಂಡ್ ಹೊಟೆಲ್ ನಲ್ಲಿ ಕಾಂಗ್ರೆಸ್ ಒಕ್ಕಲಿಗ ಸಮಾಜದ ನಾಯಕರ ಸಭೆಯಲ್ಲಿ ಸಿದ್ದರಾಮಯ್ಯ ಅವರು ಕೋಲಾರದಿಂದಲೇ ಸ್ಪರ್ಧೆ ಮಾಡಲೇಬೇಕೆಂದು ನಿರ್ಧಾರ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದಾರೆ.

Join Whatsapp