ರಾಜಕೀಯ ದಾಳದ ಬಲಿಪಶುವಾದ ದಲಿತ, ಕ್ರೈಸ್ತ ಸಮುದಾಯ: ಆನಂದ್ ಮಿತ್ತಬೈಲ್

Prasthutha|

ಮಂಗಳೂರು; ದಲಿತ ಮತ್ತು ಕ್ರೈಸ್ತ ಸಮುದಾಯವನ್ನು ದಾಳವಾಗಿ ಮಾತ್ರ ಬಳಸಿ ರಾಜಕೀಯ ಅಧಿಕಾರದಿಂದ ದೂರ ಇಡುವ ಪ್ರಯತ್ನ ಎಲ್ಲಾ ರಾಜಕೀಯ ಪಕ್ಷಗಳು ಮಾಡುತ್ತಾ ಬಂದಿವೆ. ದಲಿತ ಚಳುವಳಿಗಳನ್ನು ಭಿನ್ನಾಭಿಪ್ರಾಯಗಳ ಸಂಕೀರ್ಣತೆಯ ಲಾಭ ಪಡೆದ ರಾಜಕೀಯ ಪಕ್ಷಗಳು ಈ ಸಮುದಾಯವನ್ನು ಎಲ್ಲಾ ರೀತಿಯಿಂದಲೂ ಸಮಾಜದ ಮುಖ್ಯವಾಹಿನಿಯಿಂದ ಹಿಂದುಳಿಯುವಂತೆ ಮಾಡಿದೆ. ಈ ಕಾರಣಕ್ಕಾಗಿ ದಲಿತರು ಮತ್ತು ಕ್ರೈಸ್ತರು, ಮುಸ್ಲಿಮರು ಜೊತೆಗೂಡಿ ಪರ್ಯಾಯ ರಾಜಕೀಯ ಶಕ್ತಿಯಾಗಬೇಕಾಗಿದೆ ಎಂದು ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ ಆನಂದ್ ಮಿತ್ತಬೈಲ್ ಕರೆ ನೀಡಿದ್ದಾರೆ.

- Advertisement -


ಎಸ್ ಡಿಪಿಐ ದಕ ಜಿಲ್ಲಾ ಸಮಿತಿ ಆಯೋಜಿಸಿದ್ದ ಪಕ್ಷದ ದಲಿತ ಕ್ರೈಸ್ತ ಕಾರ್ಯಕರ್ತರ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಎಸ್ ಡಿಪಿಐ ರಾಜ್ಯ ಮುಖಂಡ ಶಾಫಿ ಬೆಳ್ಳಾರೆ, ಅಹಿಂದ ವರ್ಗದ ರಾಜಕೀಯ ಸಬಲೀಕರಣ ಮತ್ತು ಅನಿವಾರ್ಯ ಎಂಬ ವಿಷಯ ಮಂಡಿಸಿದರು.


ಪಕ್ಷದ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಅಧ್ಯಕ್ಷತೆ ವಹಿಸಿದ್ದರು ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ, ರೈತ ಮುಖಂಡ ವಿಕ್ಟರ್ ಮಾರ್ಟಿಸ್ ರವರು ದಲಿತ ಕ್ರೈಸ್ತ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ಮಾತನಾಡಿದರು.

- Advertisement -


ಸಜಿಪ ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪೌಸ್ತಿನ್ ಡಿಸೋಜ, ಮಲ್ಲೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೇಮ ಸತೀಶ್, ಜಿಲ್ಲಾ ಸಮಿತಿ ಸದಸ್ಯರಾದ ಲ್ಯಾನ್ಸಿ ಥೊರೆಸ್ ಹಾಗೂ ಎಸ್ ಡಿಟಿಯು ರಾಜ್ಯ ಕಾರ್ಯದರ್ಶಿ ಶೆರೀಫ್ ಪಾಂಡೇಶ್ವರ್, ಜಿಲ್ಲಾಧ್ಯಕ್ಷ ಖಾದರ್ ಫರಂಗಿಪೇಟೆ ಮತ್ತು ಎಸ್ ಡಿಪಿಐ ಬೆಂಬಲಿತ ದಲಿತ ಕ್ರೈಸ್ತ ಪಂಚಾಯತ್ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಸ್ವಾಗತಿಸಿ ಜಮಾಲ್ ಜೋಕಟ್ಟೆ ನಿರೂಪಿಸಿದರು ಅಶ್ರಫ್ ಮಂಚಿ ವಂದಿಸಿದರು.

Join Whatsapp