ಹೊಲದಲ್ಲಿ ಕೆಲಸ ಮಾಡುವುದಕ್ಕೆ ನಿರಾಕರಿಸಿದ ದಲಿತನ ಪತ್ನಿಗೆ ಥಳಿಸಿ, ಲೈಂಗಿಕ ಕಿರುಕುಳ ನೀಡಿದ ಜಾತಿವಾದಿ ಉಗ್ರರು

Prasthutha|

ಭೋಪಾಲ್‌ : ಮಧ್ಯಪ್ರದೇಶದ ಛಾತರ್‌ ಪುರದ ಗ್ರಾಮವೊಂದರ ಜಾತಿವಾದಿ ಗೂಂಡಾನೊಬ್ಬನ ಹೊಲದಲ್ಲಿ ಕೆಲಸ ಮಾಡುವುದಕ್ಕೆ ನಿರಾಕರಿಸಿದ ದಲಿತ ವ್ಯಕ್ತಿಯ ಐದು ತಿಂಗಳ ಗರ್ಭಿಣಿಗೆ ಥಳಿಸಿದುದಲ್ಲದೆ, ಲೈಂಗಿಕ ಕಿರುಕುಳ ನೀಡಿದ ಬಗ್ಗೆ ವರದಿಯಾಗಿದೆ.

- Advertisement -

ಛಾತರ್‌ ಪುರದ ಬಂಡಾರ್‌ ಗಢ ಗ್ರಾಮದಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಬೈಜನಾಥ ಆಹಿರ್ವಾರ್‌ ಪತ್ನಿಯ ಮೇಲೆ ದಾಳಿ ನಡೆದಿದೆ. ಹರ್ದೇಶ್‌ ಅಲಿಯಾಸ್‌ ಹನಿ ಪಟೇಲ್‌ ಮತ್ತು ಇತರ ಇಬ್ಬರ ವಿರುದ್ದ ಈ ಸಂಬಂಧ ಪ್ರಕರಣ ದಾಖಲಾಗಿದೆ.

ತನ್ನ ಹೊಲದಲ್ಲಿ ಕೆಲಸ ಮಾಡಲು ಬೈಜನಾಥ್‌ ನಿರಾಕರಿಸಿದುದರಿಂದ ಇದಕ್ಕೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆರೋಪಿಗಳು ಬೆದರಿಕೆಯೊಡ್ಡಿದ್ದರು. ಬಳಿಕ ಆರೋಪಿಗಳು ವೈಜನಾಥ ಮನೆಗೆ ತೆರಳಿ ಆತನ ಪತ್ನಿಯ ಮೇಲೆ ಹಲ್ಲೆ ಮಾಡಿ, ಲೈಂಗಿಕ ಕಿರುಕುಳ ನೀಡಿದ್ದಾರೆ. ತಡೆಯಲು ಬಂದ ಮಹಿಳೆಯ ಅತ್ತೆಯನ್ನೂ ಥಳಿಸಲಾಗಿದೆ.

- Advertisement -

ಹರ್ದೆಶ್‌ ಅಲಿಯಾಸ್‌ ಹನಿ ಪಟೇಲ್‌, ಆಕಾಶ್‌ ಪಟೇಲ್‌ ಮತ್ತು ವಿನೋದ್‌ ಪಟೇಲ್‌ ಮುಂತಾದವರ ವಿರುದ್ಧ ಪರಿಶಿಷ್ಟ ಜಾತಿಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.    

Join Whatsapp