ದಕ್ಷಿಣ ಕನ್ನಡ| ಎಸೆಸೆಲ್ಸಿ ಗಣಿತ ಪರೀಕ್ಷೆಗೆ ಗೈರಾದ 400ಕ್ಕೂ ಮಿಕ್ಕ ವಿದ್ಯಾರ್ಥಿಗಳು

Prasthutha|

ಮಂಗಳೂರು: ಎಸೆಸೆಲ್ಸಿಯ ಈ ಅಧ್ಯಯನ ವರ್ಷದ ಗಣಿತ ಪರೀಕ್ಷೆ ಇಂದು ನಡೆದಿದ್ದು, ದ.ಕ. ಜಿಲ್ಲೆಯ ಸಾಮಾನ್ಯ ಹಾಗೂ ಖಾಸಗಿ ಪರೀಕ್ಷಾ ಕೇಂದ್ರಗಳಲ್ಲಿ ನೋಂದಾಯಿತ ಅಭ್ಯರ್ಥಿಗಳಲ್ಲಿ 400 ಕ್ಕಿಂತ ಹೆಚ್ಚಿನ  ವಿದ್ಯಾರ್ಥಿಗಳು  ಗೈರು ಹಾಜರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

- Advertisement -

ಸಾಮಾನ್ಯ ಕೇಂದ್ರಗಳಲ್ಲಿ ಒಟ್ಟು 28738 ಮಂದಿ ನೋಂದಾಯಿತ ವಿದ್ಯಾರ್ಥಿಗಳಿದ್ದು, ಅವರಲ್ಲಿ 28,505 ಮಂದಿ ಮಾತ್ರ ಹಾಜರಾಗಿದ್ದಾರೆ. ಖಾಸಗಿ ಪರೀಕ್ಷಾ ಕೇಂದ್ರಗಳಲ್ಲಿ ನೋಂದಾಯಿತ 944 ಮಂದಿಯಲ್ಲಿ 774 ಮಂದಿ ಹಾಜರಾಗಿದ್ದರು. ಯಾವುದೇ ಕೇಂದ್ರಗಳಲ್ಲಿ ನಕಲು ಅಥವಾ ಇನ್ನಿತರ  ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸುಧಾಕರ್ ಕೆ. ತಿಳಿಸಿದ್ದಾರೆ.

Join Whatsapp