ಕುಡಿದ ಅಮಲಿನಲ್ಲಿ ಮಗಳನ್ನೇ ಕೊಚ್ಚಿಕೊಂದ ತಂದೆ

Prasthutha|

- Advertisement -

ಕುಡಿದ ಅಮಲಿನಲ್ಲಿ ಹೆತ್ತ ಮಗಳನ್ನು ಕೊಚ್ಚಿಕೊಂದ ವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಜಂತಿಯಲ್ಲಿ ನಡೆದಿದೆ. ಮೋನಮ್ಮ (14)ಕೊಲೆಯಾದ ನತದೃಷ್ಟ ಮಗಳು.

ಆರೋಪಿ ತಿಮ್ಮಯ್ಯ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಕೊಲೆಗೆ ಸ್ಪಷ್ಟವಾದ ಕಾರಣ ಇನ್ನೂ ತಿಳಿದಿಲ್ಲ.ಅದರೆ ಕುಡಿತದ ಅಮಲೇ ಈ ಕೊಲೆಗೆ ಕಾರಣ ಎನ್ನಲಾಗಿದೆ. ಪ್ರತೀ ದಿನ ರಾತ್ರಿ ಕುಡಿದು ಗಲಾಟೆ ಮಾಡುತ್ತಿದ್ದ ತಿಮ್ಮಯ್ಯ ನಿನ್ನೆಯೂ ಮಗಳೊಂದಿಗೆ ಜಗಳವಾಡಿದ್ದಾನೆ. ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಪತ್ತೆಗೆ ವಿಶೇಷ ತಂಡವೊಂದು ರಚಿಸುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Join Whatsapp