ಜನವಸತಿ ಪ್ರದೇಶದಲ್ಲಿ ಶವ ಸಂಸ್ಕಾರ: ಪ್ರಶ್ನಿಸಿದವರ ಮೇಲೆಯೇ ಹಲ್ಲೆ !

Prasthutha|

ಬೆಂಗಳೂರು: ಜನವಸತಿ ಪ್ರದೇಶದಲ್ಲಿ ಶವ ಸಂಸ್ಕಾರ ಮಾಡಿದಕ್ಕೆ  ಪ್ರಶ್ನಿಸಿದ ಸ್ಥಳೀಯ ಮೇಲೆ ಸಂಬಂಧಿಕರು ಕಲ್ಲಿನಿಂದ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ವಲಯದ ಪಾಂಡುರಂಗ ಲೇಔಟ್​ ನಲ್ಲಿ ನಡೆದಿದೆ.

- Advertisement -

80 ವರ್ಷದ ವೃದ್ಧೆ ಮೂರು ದಿನಗಳ ಹಿಂದೆ ಮೃತಪಟ್ಟಿದ್ದರು. ಮನೆಯ ಹಿಂಭಾಗದಲ್ಲಿ ಮೃತ ವೃದ್ಧೆಯ ಶವ ಸಂಸ್ಕಾರವಾಗಿದೆ. ಶವ ಸಂಸ್ಕಾರ ಮಾಡಿರುವ ಜಾಗದ ಸುತ್ತ ಮನೆಗಳು ಇವೆ. ಹೀಗಾಗಿ ಸ್ಥಳೀಯರು ವಿರೋಧಿಸಿದ್ದರು.

ಸದ್ಯ ಪುಟ್ಟೇನಹಳ್ಳಿ ಪೊಲೀಸರು, ಸ್ಥಳೀಯರನ್ನು ರಾಜಿ ಸಂಧಾನ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Join Whatsapp