ಕೇರಳ ರಾಜ್ಯಪಾಲ – ಆರೆಸ್ಸೆಸ್ ಮುಖ್ಯಸ್ಥ ಭೇಟಿ: ಪ್ರಶ್ನಿಸಿದ ಸಿಪಿಐಎಂ

Prasthutha|

ತಿರುವನಂತಪುರಂ: ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ತ್ರಿಶೂರಿನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿರುವ ನಡೆಯನ್ನು ಆಡಳಿತರೂಢ ಸಿಪಿಐಎಂ ಪ್ರಶ್ನಿಸಿದೆ.

- Advertisement -

ರಾಜ್ಯಪಾಲರು ಎಲ್ಲಾ ಶಿಷ್ಟಾಚಾರಗಳನ್ನು ಉಲ್ಲಂಘಿಸಿ ಸ್ಥಳೀಯ ಆರೆಸ್ಸೆಸ್ ಮುಖಂಡನ ಮನೆಗೆ ಭಾಗವತ್ ಅವರನ್ನು ಕರೆಸುವ ಮೂಲಕ ತಮ್ಮ ಸ್ಥಾನಕ್ಕೆ ಅಪಮಾನ ಮಾಡಿದ್ದಾರೆ ಎಂದು ಸಿಪಿಐಎಂ ನ ಹಿರಿಯ ನಾಯಕ ಎಂ.ವಿ ಜಯರಾಜನ್ ತಿಳಿಸಿದ್ದಾರೆ.

ಕೇರಳ ಸರ್ಕಾರ ಮತ್ತು ರಾಜ್ಯಪಾಲ ಆರಿಫ್ ಖಾನ್ ನಡುವಿನ ಜಂಟಿ ಕಾಳಗದ ಮಧ್ಯೆ ಜಯರಾಜನ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. ರಾಜ್ಯಪಾಲ ಆರಿಫ್ ಖಾನ್ ಅವರು ಸಂಘಪರಿವಾರದ ಮುಖಂಡರಂತೆ ವರ್ತಿಸುತ್ತಿದ್ದಾರೆ ಎಂದು ಜಯರಾಜನ್ ಆರೋಪಿಸಿದ್ದಾರೆ.

- Advertisement -

ಕಳೆದ ರಾತ್ರಿ 8 ಗಂಟೆಗೆ ಆರಿಫ್ ಖಾನ್ ಅವರು ಭಾಗವತ್ ಅವರೊಂದಿಗೆ ಸಂಕ್ಷಿಪ್ತ ಸಭೆ ನಡೆಸಿದ್ದಾರೆ ಎಂದು ರಾಜ್ಯಪಾಲರ ಕಚೇರಿ ಮೂಲಗಳು ದೃಢಪಡಿಸಿವೆ.



Join Whatsapp