ಒಡಿಶಾದ ಹಿರಿಯ ಬಿಜೆಪಿ ನಾಯಕ ಬಿಷ್ಣು ಚರಣ್ ಸೇಥಿ ನಿಧನ

Prasthutha|

ಭುವನೇಶ್ವರ: ಒಡಿಶಾದ ಹಿರಿಯ ಬಿಜೆಪಿ ನಾಯಕ, ವಿಧಾನಸಭೆಯ ಉಪನಾಯಕ ಬಿಷ್ಣು ಚರಣ್ ಸೇಥಿ(61) ನಿಧನರಾದರು.

- Advertisement -

ತೀವ್ರ ಶ್ವಾಸಕೋಶದ ತೊಂದರೆ ಮತ್ತು ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ಆಗಸ್ಟ್ 16 ರಂದು ಭುವನೇಶ್ವರದ ಏಮ್ಸ್ ಗೆ ದಾಖಲಿಸಲಾಗಿತ್ತು. ಮೂತ್ರಪಿಂಡ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು  ತೀವ್ರ ಹೃದಯ ವೈಫಲ್ಯದಿಂದಾಗಿ ಮೃತಪಟ್ಟಿದ್ದಾರೆ ಎಂದು ಏಮ್ಸ್-ಭುವನೇಶ್ವರ ಅಧೀಕ್ಷಕ ಎಸ್ ಎನ್ ಮೊಹಂತ್ ಸುದ್ದಿಗಾರರಿಗೆ ತಿಳಿಸಿದರು.

ಭದ್ರಕ್ ಜಿಲ್ಲೆಯಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸೇಥಿ ಅವರು ಧಾಮ್ ನಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾಗಿದ್ದರು.

- Advertisement -

ಸೇಥಿ ಅವರು ಪತ್ನಿಯನ್ನು ಅಗಲಿದ್ದಾರೆ. ರಾಜ್ಯಪಾಲ ಗಣೇಶಿ ಲಾಲ್ ಮತ್ತು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೇರಿದಂತೆ ಹಲವು ನಾಯಕರು ಸೇಥಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

2019 ರ ಚುನಾವಣೆಯ ನಂತರ ವಿಧಾನಸಭೆಗೆ ಆಯ್ಕೆಯಾದ ತನ್ನ 23 ಶಾಸಕರಲ್ಲಿ ಇಬ್ಬರನ್ನು ಬಿಜೆಪಿ ಕಳೆದುಕೊಂಡಿದೆ. ಇದಕ್ಕೂ ಮೊದಲು, ಬಾಲಸೋರ್ ಶಾಸಕ ಮದನ್ಮೋಹನ್ ದತ್ತಾ ಅವರು 2020 ರಲ್ಲಿ ನಿಧನರಾಗಿದ್ದರು.

Join Whatsapp