ಬಿಜೆಪಿಯ ಮಹಿಳಾ ವಿರೋಧಿ ನೀತಿ ಖಂಡಿಸಿ ಸಿಪಿಐನಿಂದ ಪ್ರತಿಭಟನೆ

Prasthutha|

ಮಂಗಳೂರು: ಬಿಜೆಪಿಯ ಮಹಿಳಾ ವಿರೋಧಿ ನೀತಿ ಖಂಡಿಸಿ ಹಾಗೂ ಮಂತ್ರಿ ವಿ.ಸೋಮಣ್ಣನವರನ್ನು ಸಂಪುಟದಿಂದ ವಜಾ ಗೊಳಿಸಲು ಒತ್ತಾಯಿಸಿ ಸಿಪಿಐ ಮತ್ತು ಭಾರತೀಯ ಮಹಿಳಾ ಒಕ್ಕೂಟದವರು ಮಂಗಳೂರಿನ ಕ್ಲಾಕ್ ಟವರ್ ಬಳಿ ಗುರುವಾರ ಪ್ರತಿಭಟನೆ ನಡೆಸಿದರು.

- Advertisement -

ಹಿರಿಯ ಮುಖಂಡ ಸೀತಾರಾಮ ಬೇರಿಂಜ ಮಾತನಾಡಿ, ಸೋಮಣ್ಣ ಅವರು ಸಾರ್ವಜನಿಕವಾಗಿ ಮಹಿಳೆಯ ಕೆನ್ನೆಗೆ ಹೊಡೆದಿದ್ದಾರೆ. ಈಗ ಹೊಡೆದಿಲ್ಲ ಎನ್ನುತ್ತಿದ್ದಾರೆ. ಕೂಡಲೆ ಅವರೇ ರಾಜೀನಾಮೆ ಕೊಡಬೇಕು ಇಲ್ಲವೇ ಮುಖ್ಯಮಂತ್ರಿ ಅವರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕಮ್ಯೂನಿಸ್ಟ್ ನಾಯಕರಾದ ವಿ. ಕುಕ್ಯಾನ್, ಬಿ. ಶೇಖರ್, ಸೀತಾರಾಮ ಬೇರಿಂಜ, ಸುರೇಶ್ ಕುಮಾರ್, ಎಂ. ವಿ. ರಾವ್, ಪ್ರಭಾಕರ ರಾವ್, ಎಂ. ಕರುಣಾಕರ, ಭಾರತಿ ಪ್ರಶಾಂತ, ಸುಲೋಚನಾ ಮೊದಲಾದವರು ಉಪಸ್ಥಿತರಿದ್ದರು.

Join Whatsapp