ಸುಳ್ಯ: ದಂಪತಿ ಆತ್ಮಹತ್ಯೆ

Prasthutha|

ಸುಳ್ಯ: ತಮಿಳುನಾಡು ಮೂಲದ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಸುಳ್ಯ ತಾಲೂಕಿನ ಎಲಿಮಲೆ ತೋಟದಲ್ಲಿ ಆಗಸ್ಟ್ 22ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

- Advertisement -

 ಶಿವಕುಮಾರ ಅಲಿಯಾಸ್​ ರಾಜನ್​ (54), ಮುತ್ತುಲಕ್ಷ್ಮೀ (47) ಮೃತ ದಂಪತಿಗಳು. ಕಳೆದ ಕೆಲವು ವರ್ಷಗಳಿಂದ ದಂಪತಿ ದೇವಚಳ್ಳ ಗ್ರಾಮದ ಗುಡ್ಡದಲ್ಲಿ ರಬ್ಬರ್ ಟ್ಯಾಪಿಂಗ್​ ಕಾರ್ಯದಲ್ಲಿ ತೊಡಗಿದ್ದರು.  ಅಲ್ಲಿಯೇ ಭೂಮಿಯನ್ನು ಸಹ ಖರೀದಿಸಿದ್ದರು.

ಸೋಮವಾರ ರಾತ್ರಿ ದಂಪತಿ ಮಧ್ಯೆ ಜಗಳ ನಡೆದಿದೆ. ಸುಳ್ಯದಲ್ಲಿ ವಾಸವಿದ್ದ ತಮ್ಮ ಮಗಳಿಗೆ ಈ ಕುರಿತಾಗಿ ತಾಯಿ ಮುತ್ತುಲಕ್ಷ್ಮೀ ಹೇಳಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಮನನೊಂದ ರಾಜನ್ ಮೊದಲು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದನ್ನು ಕಂಡ ಪತ್ನಿ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಶಂಕಿಸಲಾಗಿದೆ.

- Advertisement -

ದಂಪತಿಗೆ ಒಟ್ಟು ಮೂವರು ಮಕ್ಕಳಿದ್ದು, ಮಗ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದಾನೆ. ಇಬ್ಬರೂ ಹೆಣ್ಣುಮಕ್ಕಳಿಗೆ ಮದುವೆ ಆಗಿದೆ. ದಂಪತಿ ಸುಳ್ಯದಲ್ಲಿ ವಾಸವಾಗಿದ್ದರು.

Join Whatsapp