ಬೊಮ್ಮಾಯಿ ಸರ್ಕಾರದ ಕೊನೆ ಬಜೆಟ್​ ಮಂಡನೆಗೆ ಕ್ಷಣಗಣನೆ

Prasthutha|

ಬೆಂಗಳೂರು: ಮುಖ್ಯಂಮತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ರಾಜ್ಯ ಬಜೆಟ್ ಮಂಡಿಸಲಿದ್ದಾರೆ.

- Advertisement -

ಇಂದು ಬೆಳಿಗ್ಗೆ 10:15ಕ್ಕೆ ಬಜೆಟ್​ ಮಂಡನೆ ಆರಂಭವಾಗಲಿದೆ.

ಚುನಾವಣೆ ಹೊಸ್ತಿಲಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಸಾಕಷ್ಟು ಕುತೂಹಲ ಮೂಡಿಸಿದೆ. ಜೊತೆಗೆ ಚುನಾವಣಾ ಬಜೆಟ್ ಆಗಿಯೇ ಆಯವ್ಯಯ ಮಂಡನೆಯಾಗುವುದು ಖಚಿತವಾಗಿದೆ.

- Advertisement -

ಈ ಬಜೆಟ್‌ನಲ್ಲಿ ಮಹಿಳೆಯರ ಮನಗೆಲ್ಲಲು ಬೊಮ್ಮಾಯಿ ಸರ್ಕಾರ ಯೋಜನೆ ರೂಪಿಸಿದೆ ಎನ್ನಲಾಗುತ್ತಿದೆ.

ಜೆಡಿಎಸ್ ಪಂಚರತ್ನ ಯಾತ್ರೆಯಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸಾಲಮನ್ನಾ ಮಾಡುವುದಾಗಿ ಘೋಷಣೆ ಮಾಡಲಾಗಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂಪಾಯಿ ಘೋಷಣೆ ಮಾಡಿದೆ. ಆದ್ದರಿಂದ ಬೊಮ್ಮಾಯಿ ಕೂಡಾ ಅದೇ ಪ್ಲಾನ್ ಮಾಡುವ ನಿರೀಕ್ಷೆ ಇದೆ.

Join Whatsapp