ಕಡಬ : ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಕಾನ್‌ ಸ್ಟೇಬಲ್‌ ಶಿವರಾಜ್‌ ಜಾಮೀನು ಅರ್ಜಿ ತಿರಸ್ಕಾರ

Prasthutha|

ಕಡಬ: ಸಂತ್ರಸ್ತೆ ಬಾಲಕಿಗೆ ಕಾನೂನು ನೆರವು ನೆಪದಲ್ಲಿ ಲೈಂಗಿಕವಾಗಿ ಬಳಸಿ ಗರ್ಭಿಣಿಯಾಗಿಸಿ ಬಳಿಕ ಗರ್ಭಪಾತ ಮಾಡಿಸಿದ್ದ ಆರೋಪದಲ್ಲಿ ಬಂಧಿತನಾಗಿರುವ ಕಾನ್‌ ಸ್ಟೇಬಲ್‌ ಶಿವರಾಜ್ ಜಾಮೀನು ಅರ್ಜಿ ತಿರಸ್ಕಾರವಾಗಿದೆ.

- Advertisement -

ಕಡಬ ಠಾಣೆಯ ಪೊಲೀಸ್ ಕಾನ್‌ ಸ್ಟೇಬಲ್‌ ಶಿವರಾಜ್ ಜಾಮೀನು ಅರ್ಜಿಯನ್ನು ಪುತ್ತೂರಿನ 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತಿರಸ್ಕರಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಗ್ರಾಮವೊಂದರ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಗರ್ಭಿಣಿಯಾಗಿಸಿದ್ದಲ್ಲದೆ, ಗರ್ಭಪಾತ ಮಾಡಿಸಿದ್ದ ಆರೋಪ ಪ್ರಕರಣದ ಆರೋಪಿ ಶಿವರಾಜ್‌ ನನ್ನು ಕಳೆದ ಸೆ. 28 ರಂದು ಪೊಲೀಸರು ಬಂಧಿಸಿದ್ದರು.

ಈತನ ಬಂಧನವಾಗಿ ಇದೀಗ ಸುಮಾರು 100 ದಿನಗಳೇ ಕಳೆದಿದ್ದು, ಪ್ರಕರಣದ ದೋಷಾರೋಪಣ ಪಟ್ಟಿಯು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಪರ ವಕೀಲರು ಈತನಿಗೆ ಜಾಮೀನು ಕೋರಿ ಪುತ್ತೂರಿನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದು‌ ಈಗ ತಿರಸ್ಕೃತಗೊಂಡಿದೆ ಎಂದು ತಿಳಿದು ಬಂದಿದೆ.

Join Whatsapp