RSS ಕಾರ್ಯಕ್ರಮದಲ್ಲಿ ಗಣವೇಷ ಧರಿಸಿದ ಪತ್ರಕರ್ತರಿಗಷ್ಟೇ ಪ್ರವೇಶ !

Prasthutha|

ಕಲಬುರಗಿ: ಆರ್‌ಎಸ್‌ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಅವರ ಕಾರ್ಯಕ್ರಮದಲ್ಲಿ ಪತ್ರಕರ್ತರು ಗಣವೇಷ ಧರಿಸಿ ಬಂದರೆ ಮಾತ್ರ ಒಳಗೆ ಪ್ರವೇಶ ನೀಡಲಾಗುವುದು ಎಂದು ಸಂಘಟಕರು ಪಟ್ಟು ಹಿಡಿದ ಘಟನೆ ಕಲಬುರಗಿಯ ಖಮಿತಕರ್ ಭವನದಲ್ಲಿ ನಡೆದಿದೆ.

- Advertisement -

ನಾವು ಪತ್ರಕರ್ತರು ಕಾರ್ಯಕ್ರಮದ ವರದಿ ಮಾಡಲು ಬಂದಿದ್ದೇವೆ. ಸಂಘದ ಕಾರ್ಯಕರ್ತರಿಗೆ ಹೇಳಿದಂತೆ ನಮಗೂ ಗಣವೇಷ ಹಾಕಿಕೊಂಡು ಬಾ ಎಂದರೆ ಹೇಗೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಚರ್ಚೆ ಮಾಡುವ ಸಮಯ ಇದಲ್ಲ. ನಾವು ಮುಂಚೆಯೇ ಗಣ ವೇಷ ಹಾಕಿಕೊಂಡು ಬರುವ ಪತ್ರಕರ್ತರಿಗೆ ಮಾತ್ರ ಪ್ರವೇಶ ಎಂದು ಹೇಳಿದ್ದೆವು. ಗಣವೇಷವಿಲ್ಲದವರಿಗೆ ಪ್ರವೇಶವಿಲ್ಲ ಎಂದರು. ಹೀಗಾಗಿ ವರದಿಗೆಂದು ತೆರಳಿದ ಪತ್ರಕರ್ತರು ಅಲ್ಲಿಂದ ವಾಪಸಾದರು.

Join Whatsapp