ಕಾಂಗ್ರೆಸ್ಸಿಗರು ನೈಜ ಹಿಂದೂಗಳು: ವಿ.ಎಸ್‌.ಉಗ್ರಪ್ಪ

Prasthutha|

ಮೈಸೂರು: ನೈಜ ಹಿಂದೂಗಳು ಕಾಂಗ್ರಸ್ಸಿಗರಾಗಿದ್ದಾರೆ. ಆರೆಸ್ಸೆಸ್‌ ಮತ್ತು ಬಿಜೆಪಿ ಹಿಂದುತ್ವದ ವಿರೋಧಿಗಳು ಎಂದು ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಹೇಳಿದ್ದಾರೆ.

- Advertisement -

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುತ್ವದ ತತ್ವ ಸರ್ವೇ ಜನಾ ಸುಖಿನೋ ಭವಂತು, ವಸುದೈವ ಕುಟುಂಬಕಂನಲ್ಲಿ ನಂಬಿಕೆ ಇಟ್ಟಿದೆ. ಆದರೆ ಸಂಘ ಪರಿವಾರ, ಬಿಜೆಪಿಯವರಿಗೆ ಮನುವಾದದಲ್ಲಿ ನಂಬಿಕೆ ಇದೆ. ಹಾಗಾಗಿ ಇವರು ಹಿಂದೂಗಳಲ್ಲ. ಬದಲಿಗೆ ಮನುವಾದಿಗಳು ಎಂದು ಕಿಡಿಕಾರಿದ್ದಾರೆ.

Join Whatsapp