ಎಲ್.ಪಿ.ಜಿ ಸಿಲಿಂಡರ್ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

Prasthutha|

ಬೆಂಗಳೂರು: ಎಲ್.ಪಿ.ಜಿ ಸಿಲಿಂಡರ್ ದರ ಏರಿಕೆ ವಿರೋಧಿಸಿ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಬೆಂಗಳೂರಿನಲ್ಲಿಂದು ಪ್ರತಿಭಟನೆ ನಡೆಸಲಾಯಿತು.

- Advertisement -

ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಮುಖಂಡ ಎಸ್.ಮನೋಹರ್ ಮಾತನಾಡಿ, ಅಡುಗೆ ಅನಿಲ ಸಿಲಿಂಡರ್ ದರವನ್ನು ಹದಿನೈದು ದಿನಗಳ ಅಂತರದಲ್ಲಿ 50 ರೂ ಏರಿಕೆ ಮಾಡಲಾಗಿದೆ. ಈ ಮೂಲಕ ಪ್ರತಿ ಸಿಲಿಂಡರ್ 950 ರೂ ದರಕ್ಕೆ ಹೆಚ್ಚಿಸಿ ದೇಶದ ಜನಸಾಮಾನ್ಯರು ದುಸ್ಥಿತಿ ಒದಗಿ ಬಂದಿದೆ ಎಂದು ದೂರಿದರು.


ಕೇಂದ್ರ ಸರಕಾರದ ಜನವಿರೋಧಿ ನೀತಿ ನರೇಂದ್ರ ಮೋದಿಯ ದುರಾಡಳಿತದಲ್ಲಿ ಅಚ್ಚೇ ದಿನ್ ಹೆಸರಿನಲ್ಲಿ ಜನರನ್ನು ವಂಚಿಸಿದ ಏಕೈಕ ಪ್ರಧಾನಿ ಎಂದರೆ ಅದು ನರೇಂದ್ರಮೋದಿ ಎಂಬುದು ಈಗ ಬಯಲಾಗಿದೆ, ಮೋದಿಯಂಥ ಒಬ್ಬ ಸುಳ್ಳುಗಾರ ನಿಂದ ಇಡೀ ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಆರ್ಥಿಕತೆಯನ್ನು ಸರಿದಾರಿಗೆ ತರಲು ವಿಫಲವಾಗಿರುವ ಕೇಂದ್ರ ಸರ್ಕಾರ ಜನರ ಜೀವನವನ್ನೇ ಹಾಳು ಮಾಡುತ್ತಿದೆ. ಪ್ರತಿನಿತ್ಯ ಡೀಸೆಲ್ ಪೆಟ್ರೋಲ್ ಎಲ್ ಪಿಜಿ ಅಗತ್ಯ ವಸ್ತುಗಳು ಹಾಗೂ ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ದೇಶದ ಜನ ನಿತ್ಯ ಹೈರಾಣರಾಗಿದ್ದಾರೆ ಎಂದು ಹೇಳಿದರು.

- Advertisement -


ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಮುಖಂಡರಾದ ಜಿ.ಜನಾರ್ದನ್, ಎಂ.ಎ.ಸಲೀಮ್, ಎ.ಆನಂದ, ಎಲ್.ಜಯಸಿಂಹ, ಪುಟ್ಟರಾಜು,ಮಹೇಶ್, ನವೀನ್, ಪಿ.ಸಂದೀಪ್ ಪಕ್ಷದ ಮುಖಂಡರು ಭಾಗವಹಿಸಿದ್ದರು

Join Whatsapp