ಪ್ರಿಯಾಂಕಾ ಗಾಂಧಿ ಕಾನೂನುಬಾಹಿರ ಬಂಧನ: ಕಾಂಗ್ರೆಸ್ ಕಿಡಿ

Prasthutha|

ಬೆಂಗಳೂರು: ಉತ್ತರ ಪ್ರದೇಶದಲ್ಲಿರುವುದು ಗೂಂಡಾರಾಜ್ ಅಲ್ಲ, ಅದಕ್ಕೂ ಹೆಚ್ಚಾಗಿ ‘ತಾಲಿಬಾನ್ ಆಡಳಿತ’ ಪ್ರಿಯಾಂಕಾ ಗಾಂಧಿ ಅವರ ಕಾನೂನುಬಾಹಿರ ಬಂಧನ, ದೀಪೇಂದ್ರ ಹೂಡಾ ಅವರ ಮೇಲೆ ಪೊಲೀಸರ ಹಲ್ಲೆ, ಭೂಪೇಶ್ ಬಾಗಲ್ ಅವರ ವಿಮಾನಕ್ಕೆ ಲ್ಯಾಂಡಿಂಗ್‌ ಗೆ ನಿರಾಕರಣೆ. ವಿಪಕ್ಷಗಳನ್ನು ತಡೆದು, ರೈತರ ಮಾರಣಹೋಮ ನಡೆಸಲು ನಿರ್ಧರಿಸಿದೆಯೇ ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

- Advertisement -


ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ಪ್ರತಿಭಟನೆಗಳನ್ನು ಹತ್ತಿಕ್ಕಲು ಬಿಜೆಪಿಯ ಅನೈತಿಕ ದಾರಿಗಳು ಬಹಿರಂಗಗೊಂಡಿವೆ. ಪೌರತ್ವ ಕಾಯ್ದೆ ಪ್ರತಿಭಟನೆಗೆ ಶೂಟರ್‌ಗಳನ್ನು ಕಳಿಸಿ ಗುಂಡು ಹಾರಿಸಿತ್ತು. JNU ವಿದ್ಯಾರ್ಥಿ ಪ್ರತಿಭಟನೆಯಲ್ಲಿ ABVP ಗೂಂಡಾಗಳಿಗೆ ದೊಣ್ಣೆ ಕೊಟ್ಟು ಕಳಿಸಿತ್ತು. ಕೃಷಿ ಕಾಯ್ದೆ ಪ್ರತಿಭಟನೆಯಲ್ಲಿ ಕೆಂಪು ಕೋಟೆಯಲ್ಲಿ ಗಲಭೆ ನಡೆಸಿತ್ತು, ಈಗ ರೈತರ ಕೊಲೆ ಮಾಡುತ್ತಿದೆ ಎಂದು ಆರೋಪಿಸಿದೆ.


ರೈತವಿರೋಧಿ ಕೃಷಿ ಕಾಯ್ದೆಗಳ ವಿರೋಧಿ ಪ್ರತಿಭಟನೆಗೆ 10 ತಿಂಗಳು ಕಳೆದಿವೆ. ಇಷ್ಟು ದಿನಗಳಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕಲು, ದಿಕ್ಕು ತಪ್ಪಿಸಲು, ಅಪರಾಧಿಗಳನ್ನಾಗಿಸಲು ಬಿಜೆಪಿ ಹಲವು ಕಸರತ್ತು ನಡೆಸಿತ್ತು. ಈಗ ಸ್ವತಃ ಕೇಂದ್ರ ಸಚಿವರೇ ಕಾರು ಹರಿಸಿ ರೈತರನ್ನು ಕೊಲೆ ಮಾಡಲು ಮುಂದಾಗಿದ್ದಾರೆ. ಬಿಜೆಪಿ ಕೊಲೆಗಡುಕರ ಪಕ್ಷ ಎಂದರೆ ತಪ್ಪಾಗದು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

Join Whatsapp