ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್ ಮುಖಂಡ: ಬಿಜೆಪಿ ಸೇರಲಿರುವ ಕುಲದೀಪ್ ಬಿಷ್ಣೋಯ್

Prasthutha|

ಭುವನೇಶ್ವರ: ಕಾಂಗ್ರೆಸ್ ಶಾಸಕ ಕುಲದೀಪ್ ಬಿಷ್ಣೋಯ್ ಅವರು ಹರ್ಯಾಣ ಅಸೆಂಬ್ಲಿಗೆ ಬುಧವಾರ ರಾಜೀನಾಮೆ ನೀಡಿದ್ದಾರೆ. ಅವರು ಆಡಳಿತರೂಢ ಬಿಜೆಪಿ ಪಕ್ಷಕ್ಕೆ ಸೇರುವ ಒಂದು ದಿನ ಮೊದಲು ಈ ಬೆಳವಣಿಗೆ ನಡೆದಿದೆ.

- Advertisement -

ಬಿಷ್ಣೋಯ್ ಅವರು ಅಸೆಂಬ್ಲಿ ಸ್ಪೀಕರ್ ಗಿಯಾನ್ ಚಂದ್ ಗುಪ್ತಾ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದರು. ಈ ನಿಟ್ಟಿನಲ್ಲಿ ಅವರ ಸ್ವ-ಕ್ಷೇತ್ರವಾದ ಹಿಸಾರ್ ಜಿಲ್ಲೆಯ ಆದಂಪುರದಲ್ಲಿ ಉಪಚುನಾವಣೆ ನಡೆಯಲಿದೆ.

ಜೂನ್’ನಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಬಳಿಕ ಬಿಷ್ಣೋಯ್ ಅವರನ್ನು ಕಾಂಗ್ರೆಸ್ ಪಕ್ಷವು ಎಲ್ಲಾ ಹುದ್ದೆಗಳಿಂದ ತೆರವುಗೊಳಿಸಿತ್ತು.

- Advertisement -

ನಾಲ್ಕು ಬಾರಿ ಶಾಸಕ ಮತ್ತು ಎರಡು ಸಲ ಸಂಸದರಾಗಿದ್ದ ಬಿಷ್ಣೋಯ್, ತನ್ನನ್ನು ಹರ್ಯಾಣ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕಡೆಗಣಿಸಿದ ಹಿನ್ನೆಲೆಯಲ್ಲಿ ಬಂಡಾಯದ ಬಾವುಟವನ್ನು ಪ್ರದರ್ಶಿಸಿದ್ದರು.

Join Whatsapp