ಕಾಂಗ್ರೆಸ್ ಮುಖಂಡ ಸಿ.ಆರ್.ನಟರಾಜ್, ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆ

Prasthutha|

ಬೆಂಗಳೂರು: ಕರ್ನಾಟಕ ಕಿಸಾನ್ ಕಾಂಗ್ರೆಸ್’ನ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಆರ್.ನಟರಾಜ್’ರವರು ಶುಕ್ರವಾರ ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಮುಖ್ಯ ಕಚೇರಿಯಲ್ಲಿ ಸಿ.ಆರ್.ನಟರಾಜ್’ರವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ದಾಸರಿ, “ಕಾನೂನು ಪದವೀಧರರಾಗಿರುವ ಸಿ.ಆರ್.ನಟರಾಜ್’ರವರು ರೈತರಿಗಾಗಿ ದನಿ ಎತ್ತಿದ ಹುಟ್ಟು ಹೋರಾಟಗಾರರು. ಇವರು ಕರ್ನಾಟಕ ಸುಪುತ್ರ ಪತ್ರಿಕೆಯ ಸಂಪಾದಕರು. ನ್ಯಾಷನಲ್ ಆ್ಯಕ್ಟೀವ್ ರಿಪೋರ್ಟರ್ಸ್ ಅಸೋಷಿಯೇಶನ್ ರಾಜ್ಯಾಧ್ಯಕ್ಷರಾಗಿ, ಕರ್ನಾಟಕ ಆದಿ ಜಾಂಭವ ಜನಸಂಘದ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ಕನ್ನಡಪರ ಸಂಘಟನೆಯ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಕನ್ನಡಪರ ಕಾಳಜಿ ತೋರಿದ್ದಾರೆ. ದಲಿತಪರ ಸಂಘಟನೆಗಳ ಹೋರಾಟಗಳಲ್ಲಿ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಇಂತಹ ಸುಶಿಕ್ಷಿತ ಹಾಗೂ ಅನುಭವಿ ನಾಯಕರ ಸೇರ್ಪಡೆಯಿಂದಾಗಿ ಆಮ್ ಆದ್ಮಿ ಪಾರ್ಟಿಯ ಬಲ ಹೆಚ್ಚಾಗಿದೆ” ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿಯ ಮಹದೇವಪುರ ವಿಧಾನಸಭಾ ಕ್ಷೇತ್ರದ ಮುಖಂಡರಾದ ಅಶೋಕ್ ಮೃತ್ಯುಂಜಯ, ಮುನೇಂದ್ರ ಮತ್ತಿತರರು ಭಾಗವಹಿಸಿದ್ದರು.

Join Whatsapp