ತೇಜಸ್ವಿ ಸೂರ್ಯನ ಎದೆ ಬಗೆದರೆ ಸುಳ್ಳು, ವಂಚನೆ, ದ್ರೋಹ ಮಾತ್ರ ಸಿಗುತ್ತದೆ: ಕಾಂಗ್ರೆಸ್

Prasthutha|

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯನ ಎದೆ ಬಗೆದರೆ ಸಿಗುವುದು ಎರಡಕ್ಷರವಲ್ಲ ಬದಲಾಗಿ ಸುಳ್ಳು, ವಂಚನೆ, ದ್ರೋಹ ಮಾತ್ರ ಎಂದು ಕರ್ನಾಟಕ ಕಾಂಗ್ರೆಸ್ ಹೇಳಿದೆ.

- Advertisement -

ಕೋವಿಡ್ ನ ಈ ಸಂಕಷ್ಟದ ಸಮಯದಲ್ಲೂ ವ್ಯಾಕ್ಸಿನ್ ಗೆ ಕಮಿಷನ್ ಪಡೆಯುವ ಸಂಬಂಧ ನಿನ್ನೆ ಆಡಿಯೋ ಒಂದು ವೈರಲಾಗಿದ್ದು, ಈ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯಿಸಿ ಸಂಸದ ತೇಜಸ್ವಿ ಸೂರ್ಯ ಕಾಲೆಳೆದಿದ್ದು, ಎದೆ ಬಗೆದರೆ ಎರಡಕ್ಷರ ಸಿಗಲ್ಲ ಎಂಬ ತೇಜಸ್ವಿ ಸೂರ್ಯರ ಮಾತನ್ನು ಇಂದು ಅವರಿಗೆಯೇ ನೀಡಿ ತಿರುಗೇಟು ನೀಡಿದ್ದು, ತೇಜಸ್ವಿ ಸೂರ್ಯರ ಎದೆಯಲ್ಲಿ ಸುಳ್ಳು, ವಂಚನೆ, ದ್ರೋಹ ಮಾತ್ರವಿದೆ ಎಂದು  ಪರೋಕ್ಷವಾಗಿ ಹೇಳಿದೆ.

ಈ ಸಂಬಂಧ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಅವರ ಮನೆಯ ಕಪಾಟು ತಡಕಿದರೆ ಸಿಗುವುದು ಬಡವರ ಲಸಿಕೆ ಮಾರಿಕೊಂಡ ಪಾಪದ ಹಣ ಎಂದು ಹೇಳಿದೆ.

- Advertisement -

‘ಚಿಕ್ಕಪ್ಪ, ಮಗ ಸೇರಿಕೊಂಡು ಬೆಡ್ ಬ್ಲಾಕಿಂಗ್ ದಂಧೆಯಲ್ಲದೆ ಈಗ ಲಸಿಕೆ ಕಳ್ಳತನದ ದಂಧೆಯನ್ನೂ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ತನ್ನ ಟ್ವೀಟ್ ನಲ್ಲಿ ಹೇಳಿದೆ.

Join Whatsapp