ನಟ ಚೇತನ್ ವಿರುದ್ಧ ದೂರು ದಾಖಲಿಸಿದ್ದ ಸಚ್ಚಿದಾನಂದ ಮೂರ್ತಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ದೂರು!

Prasthutha|

ಬೆಂಗಳೂರು: ಬ್ರಾಹ್ಮರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಚಿತ್ರನಟ ಚೇತನ್ ವಿರುದ್ಧ ದೂರು ನೀಡಿದ್ದ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ  ಹೆಚ್.ಎಸ್. ಸಚ್ಚಿದಾನಂದ ಮೂರ್ತಿ ವಿರುದ್ಧವೇ ಇದೀಗ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಕೆಯಾಗಿದೆ.

- Advertisement -

ನಟ ಚೇತನ್ ವಿರುದ್ಧ ದೂರು ನೀಡುವ ಸಮಯದಲ್ಲಿ ಸಚ್ಚಿದಾನಂದ ಮೂರ್ತಿ ಅವರು ಸರಕಾರಿ ಲಾಂಭನ ಮತ್ತು ಮುದ್ರೆಯನ್ನ ದುರುಪಯೋಗಪಡಿಸಿಕೊಂಡಿದ್ದಾಗಿ ಕಾವ್ಯಾ ಅಚ್ಯುತ್ ದೂರಿದ್ದಾರೆ. ಬ್ರಾಹ್ಮಣರಲ್ಲಿ ಹಿಂದುಳಿದ ವರ್ಗಗಳ ಏಳಿಗೆಗಾಗಿ ಯೋಜನೆ ರೂಪಿಸಿ, ಜಾರಿಗೊಳಿಸುವುದಷ್ಟೇ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಆದ್ಯತೆಯಾಗಿರಬೇಕಿದೆ. ಆದರೆ ಮಂಡಳಿಯ ಅಧ್ಯಕ್ಷರು ತನ್ನ ಅಧಿಕಾರವನ್ನ ದುರುಪಯೋಗಡಿಸಿಕೊಂಡು ಕರ್ನಾಟಕ ಸರಕಾರದ ಹೆಸರನ್ನ ಬಳಸಿದ್ದಲ್ಲದೇ, ಅದರ ಲಾಂಭನ, ಮುದ್ರೆಗಳನ್ನೂ ತಮ್ಮ ಸ್ವಂತಕ್ಕಾಗಿ ಬಳಸಿಕೊಂಡಿದ್ದಾರೆ. ಕಾನೂನು ರೀತಿಯಲ್ಲಿ ಇದೊಂದು ಕ್ರಿಮಿನಲ್ ಅಪರಾಧವಾಗಿದೆ ಎಂದು ದೂರುದಾರೆ ಆಪಾದಿಸಿದ್ದಾರೆ.

ನಟ ಚೇತನ್ ವಿರುದ್ಧ ಬ್ರಾಹ್ಮಣರನ್ನ ಎತ್ತಿ ಕಟ್ಟುವ ಮೂಲಕ ಸಮುದಾಯಗಳ ಮಧ್ಯೆ ಅಶಾಂತಿಯ ವಾತಾವರಣ ಬಿತ್ತುವ ಕೆಲಸವೂ ಇದರಿಂದ ನಡೆಯಲಿದೆ. ಆದ್ದರಿಂದ ತಕ್ಷಣವೇ ಹೆಚ್.ಎಸ್. ಸಚ್ಚಿದಾನಂದ ಮೂರ್ತಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ದೂರಿನಲ್ಲಿ ಒತ್ತಾಯಿಸಲಾಗಿದೆ.

Join Whatsapp